ಇಳಕಲ್: ನಗರದ ಸುಭಾಷ ಕಾಖಂಡಕಿ ಕಣ್ಣಿನ ಆಸ್ಪತ್ರೆಯಲ್ಲಿ ಕಣ್ಣಿನ ಉಚಿತ ಶಸ್ತ್ರಚಿಕಿತ್ಸಾ ಶಿಬಿರದಲ್ಲಿ 61 ಜನರಿಗೆ ಶಸ್ತ್ರಚಿಕಿತ್ಸೆ ಮಾಡಲಾಯಿತು.
ಜೋಷಿಗಲ್ಲಿಯ ಪಾಂಡುರಂಗ ದೇವಸ್ಥಾನ ಹತ್ತಿರದ ಸಮುದಾಯ ಭವನದಲ್ಲಿ ಮಂಗಳವಾರ ಉಚಿತವಾಗಿ ಕನ್ನಡಕ, ಔಷಧ ವಿತರಿಸಲಾಯಿತು. ಕಾರ್ಯಕ್ರಮವನ್ನು ಸಿದ್ಧನಕೊಳ್ಳದ ಶಿವಕುಮಾರ ಸ್ವಾಮೀಜಿ ಉದ್ಘಾಟಿಸಿದರು.
ಕುಷ್ಟಗಿಯ ರವಿ ಹಿರೇಮಠ ಮಾತನಾಡಿದರು. ನೇತ್ರ ತಜ್ಞ ಸುಶೀಲ ಕಾಖಂಡಕಿ ಅಧ್ಯಕ್ಷತೆ ವಹಿಸಿದ್ದರು.
ಮಹಾದೇವ ಕಾಂಬಾಗಿ, ಮಾಜಿ ಸೈನಿಕ ಶರಣಯ್ಯ ಹಿರೇಮಠ, ಕುಷ್ಟಗಿ ಪುರಸಭೆ ಅಧ್ಯಕ್ಷ ಮಹಾಂತೇಶ ಕೆಲಭಾವಿ, ವೀರೇಶ ಕಲಕಬಂಡಿ, ಶಿವು ಚಲವಾದಿ, ಕೇದಾರನಾಥ ತುರಕಾಣಿ, ಆಸ್ಪತ್ರೆ ಸಿಬ್ಬಂದಿ ಹುಸೇನ್ ಮುದಗಲ್ಲ, ಕಂದಕೂರಪ್ಪ ಬಡಗಿ, ವನಿತಾ ಲಮಾಣಿ, ಅನಿತಾ, ಮಹಾದೇವಿ, ಸಂಗಪ್ಪ ಸಂಗಮ, ಅವಿನಾಶ ಗುನಾರಿ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.