ಬಾಗಲಕೋಟೆ: ‘ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಒಳ್ಳೆಯ ಕೆಲಸ ಮಾಡುತ್ತಿದ್ದಾರೆ. ವಯಸ್ಸು, ಅನುಭವದಿಂದಲೂ ದೊಡ್ಡವರು. ಅವರು ಮತ್ತೆ ಮುಖ್ಯಮಂತ್ರಿಯಾದರೆ ತಪ್ಪೇನಿಲ್ಲ’ ಎಂದು ಸಚಿವ ಮುರುಗೇಶ ನಿರಾಣಿ ಹೇಳಿದರು.
ಭಾನುವಾರ ಸುದ್ದಿಗೋಷ್ಠಿಯಲ್ಲಿ, ‘ಬೀಳಗಿ ಕ್ಷೇತ್ರಕ್ಕೆ ಮತ್ತೆ ಸಿಎಂ ಆಗಿ ಬರುತ್ತೇನೆ’ ಎಂಬ ಬೊಮ್ಮಾಯಿ ಹೇಳಿಕೆ ಕುರಿತ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, ‘ಅಭಿವೃದ್ಧಿ ಕಾಮಗಾರಿಗಳ ಉದ್ಘಾಟನೆಗೆ ಬರುವಂತೆ ಕೇಳಿದಾಗ, ಸಹಜವಾಗಿ ಸಿಎಂ ಆಗಿ ಮತ್ತೆ ಬರುವೆ ಎಂದಿದ್ದಾರೆ’ ಎಂದರು.
‘ನಾವೇನು ಕಾಂಗ್ರೆಸ್ನವರಿಗೆ ಮುಖ್ಯಮಂತ್ರಿ ಹುದ್ದೆ ಕೊಡುತ್ತಿದ್ದೇವೆಯಾ? ಅವ್ರು ಬಿಜೆಪಿಯವರೇ. ಬೇರೆಯವರು ಏನೇ ಹೇಳಲಿ. ನನಗೆ ಒಪ್ಪಿಗೆ ಇದೆ’ ಎಂದು ಹೇಳಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.