ADVERTISEMENT

ಸಂಗೊಳ್ಳಿ ರಾಯಣ್ಣ ಸರ್ಕಲ್ ಬ್ಯಾನರ್‌ಗೆ ಸಗಣಿ ಎಸೆದ ಆರೋಪಿ ಬಂಧನ

​ಪ್ರಜಾವಾಣಿ ವಾರ್ತೆ
Published 24 ಆಗಸ್ಟ್ 2021, 2:58 IST
Last Updated 24 ಆಗಸ್ಟ್ 2021, 2:58 IST
ಸುರೇಶ ಶಿವಾನಂದ ಪಟ್ಟದಕಲ್
ಸುರೇಶ ಶಿವಾನಂದ ಪಟ್ಟದಕಲ್   

ಗುಳೇದಗುಡ್ಡ: ತಾಲ್ಲೂಕಿನ ಚಿಮ್ಮಲಗಿ ಗ್ರಾಮದ ಸಂಗೊಳ್ಳಿ ರಾಯಣ್ಣ ಸರ್ಕಲ್ ಬ್ಯಾನರ್‌ಗೆ ಸಗಣಿ ಎರಚಿದ ಪ್ರಕರಣದ ಆರೋಪಿ ಅದೇ ಚಿಮ್ಮಲಗಿ ಗ್ರಾಮದ ಸುರೇಶ ಶಿವಾನಂದ ಪಟ್ಟದಕಲ್ ಎಂಬಾತನನ್ನು ಭಾನುವಾರ ಬಂಧಿಸಲಾಗಿದೆ ಎಂದು ಗುಳೇದಗುಡ್ಡ ಪೊಲೀಸ್ ಠಾಣೆ ಪಿಎಸ್‍ಐ ಪುಂಡಲೀಕ ಪಟಾತರ ಹೇಳಿದರು.

ಆಗಸ್ಟ್‌ 20ರ ರಾತ್ರಿ ಚಿಮ್ಮಲಗಿ ಗ್ರಾಮದಲ್ಲಿ ಈ ಕೃತ್ಯ ಎಸಗಿದ್ದರು. ಈ ಘಟನೆಯನ್ನು ಖಂಡಿಸಿ ಸಂಗೊಳ್ಳಿ ರಾಯಣ್ಣ ಯುವ ಘರ್ಜನೆ ಜಿಲ್ಲಾ ಹಾಗೂ ಗ್ರಾಮ ಘಟಕದ ಪದಾಧಿಕಾರಿಗಳು ಹಾಗೂ ಚಿಮ್ಮಲಗಿ ಗ್ರಾಮದ ಹಿರಿಯರು ಕಿಡಿಗೇಡಿಗಳನ್ನು ಬಂಧಿಸಲು ಪ್ರತಿಭಟನೆ ಮಾಡಿ ಸೂಕ್ತ ಕ್ರಮ ಕೈಗೊಳ್ಳಲು ಮನವಿ ಮಾಡಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT