ADVERTISEMENT

ಬಾಗಲಕೋಟೆ: ನಾಗರಹಾವು ಕಚ್ಚಿ ಉರಗ ಮಿತ್ರ ಸದಾಶಿವ ಕರಣಿ ಸಾವು

​ಪ್ರಜಾವಾಣಿ ವಾರ್ತೆ
Published 24 ಜೂನ್ 2021, 9:27 IST
Last Updated 24 ಜೂನ್ 2021, 9:27 IST
ಉರಗ ಮಿತ್ರ ಸದಾಶಿವ ಕರಣಿ
ಉರಗ ಮಿತ್ರ ಸದಾಶಿವ ಕರಣಿ   

ಬಾಗಲಕೋಟೆ: ಹಾವುಗಳನ್ನ ಹಿಡಿಯುವಲ್ಲಿ ಪರಿಣಿತಿ ಪಡೆದಿದ್ದ ಬಾದಾಮಿ ತಾಲ್ಲೂಕಿನ ಕಳಸಕೊಪ್ಪ ಗ್ರಾಮದ ಉರಗ ಮಿತ್ರ ಸದಾಶಿವ ಕರಣಿ (30) ಹಾವು ಕಚ್ಚಿ ಮೃತಪಟ್ಟಿದ್ದಾರೆ.

ಸದಾಶಿವ ಕರಣಿ ಸ್ವಯಂ ಆಸಕ್ತಿಯಿಂದ ಹಾವು ಹಿಡಿಯುವುದನ್ನು ಅಭ್ಯಾಸ ಮಾಡಿಕೊಂಡಿದ್ದರು. ಹೀಗಾಗಿ ಬಾದಾಮಿ ಪಟ್ಟಣ ಸೇರಿದಂತೆ ಕಳಸಕೊಪ್ಪದ ಸುತ್ತಲಿನ ಹಳ್ಳಿಗಳಲ್ಲಿ ಹಾವು ಕಂಡರೆ ಹಿಡಿಯಲು ಜನರು ಸದಾಶಿವ ಅವರಿಗೆ ಕರೆ ಮಾಡುತ್ತಿದ್ದರು. ಹಿಡಿದ ಹಾವನ್ನು ನಂತರ ಸುರಕ್ಷಿತವಾಗಿ ಕಾಡಿಗೆ ಬಿಟ್ಟು ಬರುತ್ತಿದ್ದರು.

ಕಳಸಕೊಪ್ಪದ ಹೊಲವೊಂದರಲ್ಲಿ ಬುಧವಾರ ಮಧ್ಯಾಹ್ನ ನಾಗರಹಾವು ಹಿಡಿದಿದ್ದ ಸದಾಶಿವ ನಂತರ ಅದೇ ಹಾವು ಕಚ್ಚಿ ಅಸ್ವಸ್ಥಗೊಂಡಿದ್ದರು. ಅದಕ್ಕೆ ಮನೆಯಲ್ಲಿ ತಾನೇ ಗಿಡಮೂಲಿಕೆಯಿಂದ ಔಷಧಿ ತಯಾರಿಸಿ ಸದಾಶಿವ ಸೇವಿಸಿದ್ದರು. ಆದರೆ ತಡರಾತ್ರಿ ತೀವ್ರ ಅಸ್ವಸ್ಥಗೊಂಡು ಮೃತಪಟ್ಟಿದ್ದಾರೆ.

ADVERTISEMENT

ಈ ಬಗ್ಗೆ ಕಲಾದಗಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.