ADVERTISEMENT

ಹೃದಯಾಘಾತದಿಂದ ಯೋಧ ಮಂಜುನಾಥ ಬೈಲಕೂರ ನಿಧನ

​ಪ್ರಜಾವಾಣಿ ವಾರ್ತೆ
Published 11 ಆಗಸ್ಟ್ 2024, 16:04 IST
Last Updated 11 ಆಗಸ್ಟ್ 2024, 16:04 IST
ಮಂಜುನಾಥ ಬೈಲಕೂರ
ಮಂಜುನಾಥ ಬೈಲಕೂರ   

ಅಮೀನಗಡ: ಸೇನೆಯಲ್ಲಿ ಸೇವೆ ಸಲ್ಲಿಸುತ್ತಿದ್ದ ಸಮೀಪದ ಬಸವನಾಳ ಗ್ರಾಮದ ಮಂಜುನಾಥ ಶರಣಪ್ಪ ಬೈಲಕೂರ (33) ರಾಜಸ್ಥಾನದಲ್ಲಿ ಹೃದಯಾಘಾತದಿಂದ ಮೃತಪಟ್ಟಿದ್ದಾರೆ.

ಮೃತರಿಗೆ ತಾಯಿ, ಪತ್ನಿ, ಇಬ್ಬರು ಮಕ್ಕಳು ಹಾಗೂ ಸಹೋದರ ಇದ್ದಾರೆ.
ಕಳೆದ 12ವರ್ಷಗಳಿಂದ ಯೋಧರಾಗಿ ಸೇವೆಸಲ್ಲಿಸುತ್ತಿದ್ದ ಅವರು ಪ್ರಸ್ತುತ ರಾಜಸ್ಥಾನದಲ್ಲಿ ಸೇವೆ ಸಲ್ಲಿಸುತ್ತಿದ್ದರು. ಯೋಧನ ಪಾರ್ಥಿವ ಶರೀರವು ಸೋಮವಾರ ಸ್ವಗ್ರಾಮಕ್ಕೆ ತರುವ ಕುರಿತು ಕುಟುಂಬಸ್ಥರು ಮಾಹಿತಿ ನೀಡಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT