ADVERTISEMENT

ಕ್ವಾರೆಂಟೈನ್‌ಗೆ ಹೆದರಿ ವಿಷ ಸೇವಿಸಿದ್ದ ವ್ಯಕ್ತಿ ಸಾವು

ಮುಧೋಳ ತಾಲ್ಲೂಕು ಚಿಕ್ಕೂರಿಗೆ ಮೇ 15ರಂದು ಮಹಾರಾಷ್ಟ್ರದಿಂದ ಮರಳಿದ್ದ ವ್ಯಕ್ತಿ

​ಪ್ರಜಾವಾಣಿ ವಾರ್ತೆ
Published 22 ಮೇ 2020, 15:50 IST
Last Updated 22 ಮೇ 2020, 15:50 IST

ಬಾಗಲಕೋಟೆ: ಕ್ವಾರಂಟೈನ್‌ಗೆ ಕರೆದೊಯ್ಯಲಿದ್ದಾರೆ ಎಂದು ಹೆದರಿ ಮೇ 16ರಂದು ವಿಷ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ್ದ ವ್ಯಕ್ತಿ ನಗರದ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಕಾರಿಯಾಗದೇ ಶುಕ್ರವಾರ ಮೃತಪಟ್ಟಿದ್ದಾರೆ.

ಮುಧೋಳ ತಾಲ್ಲೂಕಿನ ಚಿಕ್ಕೂರಿನಲ್ಲಿ ನೆಲೆಸಿದ್ದ ತುಕಾರಾಮ ಲಮಾಣಿ (40) ಸಾವಿಗೀಡಾದವರು. ಮೂಲತಃ ಯಾದಗಿರಿ ಜಿಲ್ಲೆಯವರಾದ ತುಕಾರಾಮ ಚಿಕ್ಕೂರು ಬಳಿ ತೋಟ ಮಾಡಿಕೊಂಡು ಅಲ್ಲಿಯೇ ಕುಟುಂಬ ಸಮೇತ ವಾಸವಿದ್ದರು. ಮೂರು ತಿಂಗಳ ಹಿಂದೆ ಮಹಾರಾಷ್ಟ್ರದ ರತ್ನಗಿರಿ ಜಿಲ್ಲೆಗೆ ಕೆಲಸದ ನಿಮಿತ್ತಹೋಗಿದ್ದ ಅವರು ಮೇ 15ರಂದು ರತ್ನಗಿರಿಯಿಂದ ವಾಪಸ್ ಚಿಕ್ಕೂರಿಗೆ ಲಾರಿಯೊಂದರಲ್ಲಿ ಬಂದಿದ್ದರು.

ತುಕಾರಾಮ ಊರಿಗೆ ಮರಳಿರುವ ಸುದ್ದಿ ತಿಳಿದು ಗ್ರಾಮದ ಆಶಾ ಕಾರ್ಯಕರ್ತೆ ಮನೆಗೆ ತೆರಳಿ ಮಾಹಿತಿ ಕಲೆ ಹಾಕಿದ್ದರು. ಇನ್ನು ಅಧಿಕಾರಿಗಳು ಬಂದು ತನ್ನನ್ನು ಕ್ವಾರಂಟೈನ್‌ಗೆ ಕರೆದೊಯ್ಯಲಿದ್ದಾರೆ ಎಂದು ಭೀತಿಗೊಳಗಾದ ತುಕಾರಾಮ, ಮನೆಯಲ್ಲಿಯೇ ಕೀಟನಾಶಕ ಸೇವನೆ ಮಾಡಿದ್ದರು. ನಂತರ ಮನೆಯವರು ಚಿಕಿತ್ಸೆಗಾಗಿ ಅವರನ್ನು ಬಾಗಲಕೋಟೆಯ ಕುಮಾರೇಶ್ವರ ಆಸ್ಪತ್ರೆಗೆ ದಾಖಲಿಸಿದ್ದರು.

ADVERTISEMENT

ಲೋಕಾಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.