ADVERTISEMENT

ಯುವ ಕಾಂಗ್ರೆಸ್‌ಗೆ ಭರತ್‌ ಕುಮಾರ್‌ ಆಯ್ಕೆ

​ಪ್ರಜಾವಾಣಿ ವಾರ್ತೆ
Published 1 ಫೆಬ್ರುವರಿ 2021, 13:09 IST
Last Updated 1 ಫೆಬ್ರುವರಿ 2021, 13:09 IST
ಭರತ್ ಕುಮಾರ್‌
ಭರತ್ ಕುಮಾರ್‌   

ಹೊಸಪೇಟೆ: ಕರ್ನಾಟಕ ಪ್ರದೇಶ ಯುವ ಕಾಂಗ್ರೆಸ್‌ ಸಮಿತಿಗೆ ಇಲ್ಲಿನ ಬ್ಲಾಕ್‌ ಅಧ್ಯಕ್ಷರಾಗಿ ಸಿ.ಆರ್‌. ಭರತ್‌ ಕುಮಾರ್‌ ಚುನಾಯಿತರಾಗಿದ್ದಾರೆ.

ಆಯಿಶಾ ಬೇಗಂ, ಎಚ್‌.ಎಲ್‌. ಸಂತೋಷ್‌ ಕುಮಾರ ಉಪಾಧ್ಯಕ್ಷರಾಗಿ ಆಯ್ಕೆಯಾಗಿದ್ದಾರೆ. ಆಯ್ಕೆಯಾದ ನಂತರ ಭರತ್‌ ಕುಮಾರ್ ಅವರು ನಗರದ ಡಾ.ಬಿ.ಆರ್‌. ಅಂಬೇಡ್ಕರ್‌ ವೃತ್ತಕ್ಕೆ ತೆರಳಿ ಪುತ್ಥಳಿಗೆ ಮಾಲಾರ್ಪಣೆ ಮಾಡಿದರು. ಮುಖಂಡರಾದ ದೀಪಕ್‌ ಕುಮಾರ್‌ ಸಿಂಗ್‌, ಮೊಹಮ್ಮದ್‌ ಇಮಾಮ್‌ ನಿಯಾಜಿ, ಗುಜ್ಜಲ ನಾಗರಾಜ, ನಿಂಬಗಲ್ ರಾಮಕೃಷ್ಣ, ಯರಿಸ್ವಾಮಿ, ಎಚ್.ಹುಲುಗಣ್ಣ, ರಮೇಶ, ಬಿ.ಮಾರೆಣ್ಣ, ವಿಜಯಕುಮಾರ್, ಬಾಣದ ಗಣೇಶ್, ಓಬಳೇಶ್, ಆಲಂ ಬಾಷಾ, ಮುನಿಯಪ್ಪ, ಸೈಯದ್ ಬುಡೇನ್ ರಾಜಾ, ಹೊನ್ನೂರು ಸ್ವಾಮಿ, ಗುರುರಾಜ, ಶಿವಕುಮಾರ್, ಸುನೀಲ್ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT