ADVERTISEMENT

ಶಿವಮೊಗ್ಗದ ರಾಜೇಂದ್ರಗೆ ಸಮಗ್ರ ಪ್ರಶಸ್ತಿ

ನ್ಯಾಷನಲ್‌ ಬೈಕ್‌ ರೇಸ್‌ ಚಾಂಪಿಯನ್‌ಷಿಪ್‌

​ಪ್ರಜಾವಾಣಿ ವಾರ್ತೆ
Published 18 ಅಕ್ಟೋಬರ್ 2021, 7:59 IST
Last Updated 18 ಅಕ್ಟೋಬರ್ 2021, 7:59 IST
ಹೊಸಪೇಟೆ ತಾಲ್ಲೂಕಿನ ಹೊಸ ಹಂಪಿಯಲ್ಲಿ ಭಾನುವಾರ ನಡೆದ ಬೈಕ್‌ ರೇಸ್‌ ಸ್ಪರ್ಧೆ
ಹೊಸಪೇಟೆ ತಾಲ್ಲೂಕಿನ ಹೊಸ ಹಂಪಿಯಲ್ಲಿ ಭಾನುವಾರ ನಡೆದ ಬೈಕ್‌ ರೇಸ್‌ ಸ್ಪರ್ಧೆ   

ಹೊಸಪೇಟೆ (ವಿಜಯನಗರ): ತಾಲ್ಲೂಕಿನ ಹೊಸ ಹಂಪಿ ಹೊರವಲಯದಲ್ಲಿ ಭಾನುವಾರ ನಡೆದ ‘ಉತ್ಸವ್‌ ದಿ ಹಂಪಿ’ ರಾಷ್ಟ್ರೀಯ ಬೈಕ್‌ ರೇಸ್‌ ಚಾಂಪಿಯನ್‌ಷಿಪ್‌ನಲ್ಲಿ ಶಿವಮೊಗ್ಗದ ರಾಜೇಂದ್ರ ಅವರು ಅತ್ಯುತ್ತಮ ಸಾಧನೆ ತೋರಿ ಸಮಗ್ರ ಪ್ರಶಸ್ತಿಗೆ ಪಾತ್ರರಾಗಿದ್ದಾರೆ.

ಕೇರಳದ ಸ್ಯಾಮುವೆಲ್‌ ಜಾಕೋಬ್‌ ಎರಡನೇ ಮತ್ತು ಮೈಸೂರಿನ ಅಬ್ದುಲ್‌ ವಾಹೀದ್‌ ತನ್ವೀರ್‌ ಅವರು ಮೂರನೇ ಸ್ಥಾನಕ್ಕೆ ತೃಪ್ತಿಪಟ್ಟಿದ್ದಾರೆ.

ಒಂಬತ್ತು ಜನ ಯುವತಿಯರು ಸೇರಿದಂತೆ ದೇಶದ ನಾನಾ ಭಾಗಗಳ 84 ಬೈಕ್‌ ರೇಸರ್ ಗಳು ಪಾಲ್ಗೊಂಡಿದ್ದರು. ಪ್ರವಾಸೋದ್ಯಮ ಇಲಾಖೆ, ಯುವಜನ ಸೇವಾ ಮತ್ತು ಕ್ರೀಡಾ ಇಲಾಖೆ, ಎಂಆರ್‌ಎಫ್‌ ಮತ್ತು ಮೋಟಾರ್‌ ಸ್ಪೋರ್ಟ್ಸ್‌ ಅಕಾಡೆಮಿ ವಿಜಯನಗರ ಹಂಪಿ ಸಹಭಾಗಿತ್ವದಲ್ಲಿ ಆಯೋಜಿಸಲಾಗಿತ್ತು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.