ADVERTISEMENT

74ನೇ ಬಾರಿ ರಕ್ತದಾನ ಮಾಡಿದ ರಾಜೇಶ್ ಕಾರ್ವ

​ಪ್ರಜಾವಾಣಿ ವಾರ್ತೆ
Published 22 ಜೂನ್ 2023, 15:35 IST
Last Updated 22 ಜೂನ್ 2023, 15:35 IST
   

ಕೊಟ್ಟೂರು: ಜೆಸಿಐ ಕೊಟ್ಟೂರು ಕಾಟನ್ ವತಿಯಿಂದ ಪಟ್ಟಣದ ಸಂಜೀವಿನಿ ಡೆಂಟಲ್ ಕ್ಲಿನಿಕ್ ಸಹಯೋಗದೊಂದಿಗೆ ಗುರುವಾರ ಏರ್ಪಡಿಸಿದ್ದ ರಕ್ತದಾನ ಶಿಬಿರದಲ್ಲಿ ಪತಂಜಲಿ ಯೋಗ ರಾಜ್ಯ ಸಮಿತಿ ಸದಸ್ಯ ರಾಜೇಶ್ ಕಾರ್ವ 74ನೇ ಬಾರಿ ಹಾಗೂ ರಾಜು ಛೋಪ್ರಾ 50 ನೇ ಬಾರಿ ರಕ್ತದಾನ ಮಾಡಿದ್ದು ವಿಶೇಷವಾಗಿತ್ತು.

ಶಿಬಿರ ಉದ್ಘಾಟಿಸಿದ ಜೆಸಿಐ ಅಧ್ಯಕ್ಷ ಯೋಗೀಶ್ ಅಂಗಡಿ ಮಾತನಾಡಿ, ಸಮಾಜಮುಖಿಯಾಗಿ ಕಾರ್ಯನಿರ್ವಹಿಸುತ್ತಿರುವ ರಾಜೇಶ್ ಕಾರ್ವ ಹಾಗೂ ರಾಜೇಂದ್ರ ಛೋಪ್ರಾ ಯುವ ಸಮೂಹಕ್ಕೆ ಮಾದರಿಯಾಗಿದ್ದಾರೆ ಎಂದು ಪ್ರಶಂಸೆ ವ್ಯಕ್ತಪಡಿಸಿದರು. ರಕ್ತ ದಾನ ಮಾಡುವುದರಿಂದ ಕೊಬ್ಬಿನಾಂಶ ಕಡಿಮೆಯಾಗಿ ಹೆಚ್ಚು ರಕ್ತ ವೃದ್ಧಿಯಾಗಿ ಇತರರ ಜೀವಗಳನ್ನು ಉಳಿಸಲು ಸಹಕಾರಿಯಾಗುತ್ತದೆ ಎಂದರು.

ಒಟ್ಟು 40 ಯುನಿಟ್‌ ರಕ್ತ ಸಂಗ್ರಹವಾಯಿತು. ಜೆಸಿಐ ಪದಾಧಿಕಾರಿಗಳಾದ ಪಂಪಾಪತಿ ಅಂಗಡಿ, ಗಂಗಮ್ಮನಹಳ್ಳಿ ಸಿದ್ಧಯ್ಯ, ಹೇಮಂತ್, ಜಗದೀಶ್ ಚಂದ್ರ ಬೋಸ್, ಡಾ.ರಶ್ಮಿ, ಡಾ.ಬಸವನಗೌಡ, ಡಾ.ಮುರಳಿಧರ್, ರಾಮಣ್ಣ ಮತ್ತಿತರರು ಇದ್ದರು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.