ADVERTISEMENT

18ರಂದು ಬುದ್ಧ ಪೂರ್ಣಿಮೆ

​ಪ್ರಜಾವಾಣಿ ವಾರ್ತೆ
Published 16 ಮೇ 2019, 9:12 IST
Last Updated 16 ಮೇ 2019, 9:12 IST

ಹೊಸಪೇಟೆ: ಭಗವಾನ್‌ ಗೌತಮ ಬುದ್ಧ ಅವರ 2,536ನೇ ಪೂರ್ಣಿಮೆ, ಡಾ.ಬಿ.ಆರ್‌. ಅಂಬೇಡ್ಕರ್‌ ಜಯಂತಿ ಹಾಗೂ ಹಂಪಿ–ವಿಜಯನಗರ ಬುದ್ಧ ವಿಹಾರ ನಿರ್ಮಾಣ ಟ್ರಸ್ಟ್‌ ಉದ್ಘಾಟನೆ ಮೇ 18ರಂದು ನಗರದ ರೋಟರಿ ಕ್ಲಬ್‌ನಲ್ಲಿ ನಡೆಯಲಿದೆ.

ಸಂಜೆ 5ಕ್ಕೆ ಹಂಪಿ ಕನ್ನಡ ವಿಶ್ವವಿದ್ಯಾಲಯದ ಕುಲಪತಿ ಪ್ರೊ. ಸ.ಚಿ. ರಮೇಶ್‌ ಉದ್ಘಾಟಿಸುವರು. ಬಳ್ಳಾರಿ ವಲಯದ ಐ.ಜಿ.ಪಿ. ಎಂ. ನಂಜುಂಡಸ್ವಾಮಿ ಉಪನ್ಯಾಸ ನೀಡುವರು.

ಡಾ.ಬಿ.ಆರ್‌. ಅಂಬೇಡ್ಕರ್‌ ಸಂಘದ ತಾಲ್ಲೂಕು ಅಧ್ಯಕ್ಷ ಎನ್‌. ವೀರಸ್ವಾಮಿ, ಟ್ರಸ್ಟ್‌ ಅಧ್ಯಕ್ಷ ಪ್ರೊ. ಎನ್‌. ಚಿನ್ನಸ್ವಾಮಿ ಸೋಸಲೆ, ಪ್ರಧಾನ ಕಾರ್ಯದರ್ಶಿ ಸಿ. ಸೋಮಶೇಖರ್‌ ಬಣ್ಣದಮನೆ, ಗೌರವ ಅಧ್ಯಕ್ಷ ಸಿ.ಡಿ. ಈರಣ್ಣ, ಉಪಾಧ್ಯಕ್ಷ ಮಾರುತಿ ಕಾಂಬ್ಳೆ, ಕಾರ್ಯದರ್ಶಿ ಎಚ್‌.ಸಿ. ರವಿ, ಖಜಾಂಚಿ ಸಿ. ಈಶ್ವರ, ಕಾನೂನು ಸಲಹೆಗಾರ ಸಿ. ಶಿವಮೂರ್ತಿ, ಸದಸ್ಯರಾದ ಬಿ.ವಿ. ನಾಗವೇಣಿ ಸೋಸಲೆ, ಸಿ. ಗಿರಿಜಾ ಸೋಮಶೇಖರ್‌, ದುರುಗಪ್ಪ ಪೂಜಾರ, ವೆ.ಎಚ್‌. ಪರಶುರಾಮ, ಸಿ. ಮಾರುತಿ, ಡಾಮಾಣಿ, ಸಿ. ನೀಲಕಂಠ ಉಪಸ್ಥಿತರಿರುವರು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.