ಹೊಸಪೇಟೆ (ವಿಜಯನಗರ): ಕೃಷ್ಣ ಜನ್ಮಾಷ್ಟಮಿಯನ್ನು ಜಿಲ್ಲಾಡಳಿತ ಹಾಗೂ ಬ್ರಹ್ಮಕುಮಾರಿ ಈಶ್ವರೀಯ ವಿದ್ಯಾಲಯದಿಂದ ಶುಕ್ರವಾರ ನಗರದಲ್ಲಿ ಸಂಭ್ರಮದಿಂದ ಆಚರಿಸಲಾಯಿತು.
ಜಿಲ್ಲಾಧಿಕಾರಿ ಕಚೇರಿಯಲ್ಲಿ ಏರ್ಪಡಿಸಿದ್ದ ಕಾರ್ಯಕ್ರಮದಲ್ಲಿ ಹೆಚ್ಚುವರಿ ಜಿಲ್ಲಾಧಿಕಾರಿ ಎನ್.ಮಹೇಶ್ಬಾಬು ಅವರು ಶ್ರೀಕೃಷ್ಣನ ಭಾವಚಿತ್ರಕ್ಕೆ ಪುಷ್ಪಗೌರವ ಸಲ್ಲಿಸಿದರು. ಜಿಲ್ಲಾಧಿಕಾರಿ ಕಚೇರಿ ತಹಶೀಲ್ದಾರ್ ಬಸವರಾಜ, ಸಮಾಜದ ಮುಖಂಡರಿದ್ದರು.
ಬ್ರಹ್ಮಕುಮಾರಿ ಆಶ್ರಮದಲ್ಲಿ ಏರ್ಪಡಿಸಿದ್ದ ಕಾರ್ಯಕ್ರಮದಲ್ಲಿ 50ಕ್ಕೂ ಹೆಚ್ಚು ಮಕ್ಕಳು ಕೃಷ್ಣ, ರಾಧೆ, ನಾರಾಯಣ ವೇಷ ಧರಿಸಿ ಪಾಲ್ಗೊಂಡಿದ್ದರು.
‘ಕೃಷ್ಣನಂತೆ ಗುಣವಂತರಾಗುವ ಹಬ್ಬವೇ ಕೃಷ್ಣ ಜನ್ಮಾಷ್ಟಮಿ. ಮಕ್ಕಳಲ್ಲೂ ದೈವೀ ಮೌಲ್ಯಗಳ ಸಂಸ್ಕಾರವನ್ನು ತುಂಬಬೇಕಾಗಿದೆ. ಮಕ್ಕಳು ಒಳ್ಳೆಯ ಚಾರಿತ್ರ್ಯವಂತರಾಗಬೇಕು, ಗುಣವಂತರಾಗಬೇಕು’ ಎಂದು ಬ್ರಹ್ಮಕುಮಾರಿ ಮಾನಸ ತಿಳಿಸಿದರು. ರೀನಾ ನಂದನ್ ಹಿಂದೂಸ್ತಾನಿ ಸಂಗೀತ ಕಾರ್ಯಕ್ರಮ ನಡೆಸಿಕೊಟ್ಟರು. ಅನ್ನಪೂರ್ಣ, ಬ್ರಹ್ಮಕುಮಾರಿ ರೇವತಿ ಇದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.