ADVERTISEMENT

ವಿಜಯನಗರ | ಕುರುಬರ ಸಂಘಕ್ಕೆ ನಾಗರಾಜ್‌, ರಾಘವೇಂದ್ರ ಅಧ್ಯಕ್ಷರಾಗಿ ಆಯ್ಕೆ

​ಪ್ರಜಾವಾಣಿ ವಾರ್ತೆ
Published 6 ನವೆಂಬರ್ 2022, 12:55 IST
Last Updated 6 ನವೆಂಬರ್ 2022, 12:55 IST
ಹೊಸಪೇಟೆಯಲ್ಲಿ ಭಾನುವಾರ ನಡೆದ ಸಭೆಯಲ್ಲಿ ಕರ್ನಾಟಕ ಪ್ರದೇಶ ಯುವ ಕುರುಬರ ಸಂಘದ ಜಿಲ್ಲಾ, ತಾಲ್ಲೂಕು ಘಟಕದ ಪದಾಧಿಕಾರಿಗಳನ್ನು ನೇಮಿಸಿ, ಆದೇಶ ಪತ್ರ ನೀಡಲಾಯಿತು
ಹೊಸಪೇಟೆಯಲ್ಲಿ ಭಾನುವಾರ ನಡೆದ ಸಭೆಯಲ್ಲಿ ಕರ್ನಾಟಕ ಪ್ರದೇಶ ಯುವ ಕುರುಬರ ಸಂಘದ ಜಿಲ್ಲಾ, ತಾಲ್ಲೂಕು ಘಟಕದ ಪದಾಧಿಕಾರಿಗಳನ್ನು ನೇಮಿಸಿ, ಆದೇಶ ಪತ್ರ ನೀಡಲಾಯಿತು   

ಹೊಸಪೇಟೆ (ವಿಜಯನಗರ): ಕರ್ನಾಟಕ ಪ್ರದೇಶ ಯುವ ಕುರುಬರ ಸಂಘದ ಜಿಲ್ಲಾಧ್ಯಕ್ಷರಾಗಿ ನಾಗರಾಜ್‌ ಮಜ್ಜಿಗಿ ಹಾಗೂ ಹೊಸಪೇಟೆ ತಾಲ್ಲೂಕು ಘಟಕದ ಅಧ್ಯಕ್ಷರಾಗಿ ರಾಘವೇಂದ್ರ ಕನ್ನೇರಿ ಆಯ್ಕೆಯಾಗಿದ್ದಾರೆ.

ನಗರದಲ್ಲಿ ಭಾನುವಾರ ನಡೆದ ಸಭೆಯಲ್ಲಿ ನೂತನ ಪದಾಧಿಕಾರಿಗಳನ್ನು ಆಯ್ಕೆ ಮಾಡಲಾಯಿತು. ಲಿಂಗಪ್ಪ (ಉಪಾಧ್ಯಕ್ಷ), ಪ್ರಶಾಂತ (ಪ್ರಧಾನ ಕಾರ್ಯದರ್ಶಿ), ತಾಯಪ್ಪ (ಗೌರವ ಅಧ್ಯಕ್ಷ), ವೆಂಕಟೇಶ್, ಸಂಕ್ಲಾಪುರ ಗೋಪಿನಾಥ್, ಮಿಸೆ ತಾಯಪ್ಪ, ಮಲ್ಲಿಕಾರ್ಜುನ (ಸಂಘಟನಾ ಕಾರ್ಯದರ್ಶಿಗಳು).

ತಾಲ್ಲೂಕು ಘಟಕದ ಪದಾಧಿಕಾರಿಗಳ ವಿವರ. ಶ್ರೀಧರ್‌ (ಉಪಾಧ್ಯಕ್ಷ), ಎನ್. ರಾಘವೇಂದ್ರ (ಗೌರವ ಅಧ್ಯಕ್ಷ), ಶಶಿಕುಮಾರ್ (ಪ್ರಧಾನ ಕಾರ್ಯದರ್ಶಿ), ಕಾರ್ತಿಕ್‌, ಕೆ. ರಾಘವೇಂದ್ರ, ಕೆ, ಕೃಷ್ಣ, ಜಿ. ಪರಮೇಶ್, ಗಜೇಂದ್ರ, ರವಿಕುಮಾರ್ (ಕಾರ್ಯಾಧ್ಯಕ್ಷರು).

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.