ADVERTISEMENT

73 ನಿಮಿಷದಲ್ಲಿ 700 ಶ್ಲೋಕ ಪಠಣ

​ಪ್ರಜಾವಾಣಿ ವಾರ್ತೆ
Published 9 ಮಾರ್ಚ್ 2020, 22:34 IST
Last Updated 9 ಮಾರ್ಚ್ 2020, 22:34 IST
ಪ್ರಮಾಣ ಪತ್ರದೊಂದಿಗೆ ಕೃಷ್ಣ ಚಂದ್ರದಾಸ್
ಪ್ರಮಾಣ ಪತ್ರದೊಂದಿಗೆ ಕೃಷ್ಣ ಚಂದ್ರದಾಸ್   

ಬಳ್ಳಾರಿ: ತಾಲ್ಲೂಕಿನ ಕೊರ್ಲಗುಂದಿ ಗ್ರಾಮದ ಇಸ್ಕಾನ್ ಆಶ್ರಮದ ಕೃಷ್ಣ ಚಂದ್ರದಾಸ್ (ಚಂದ್ರಮೌಳಿ ವರ್ಮ) ಅವರು ಭಗವದ್ಗೀತೆಯ 700 ಶ್ಲೋಕಗಳನ್ನು ಕೇವಲ 73 ನಿಮಿಷದಲ್ಲಿ ಪಠಿಸುವ ಮೂಲಕ ಇಂಡಿಯಾ ಬುಕ್ ಆಫ್ ರೆಕಾರ್ಡ್ಸ್‌ ಸಂಸ್ಥೆಯಲ್ಲಿ ದಾಖಲೆ ನಿರ್ಮಿಸಿ‌ದ್ದಾರೆ.

ನಗರದಲ್ಲಿ ಸೋಮವಾರ ಪತ್ರಿಕಾಗೋಷ್ಠಿಯಲ್ಲಿ ಮಾಹಿತಿ ನೀಡಿದಕೃಷ್ಣ ಚಂದ್ರದಾಸ್, ‘ಜ.27ರಂದು ಕೊರ್ಲಗುಂದಿ ಗ್ರಾಮದಲ್ಲಿ ಸಂಸ್ಕೃತ ಶಿಕ್ಷಕರ ಮುಂದೆ 700 ಶ್ಲೋಕಗಳನ್ನು ಸತತವಾಗಿ 73 ನಿಮಿಷದಲ್ಲಿ ಪಠಿಸಿ ಇಂಡಿಯಾ ಬುಕ್ ಆಫ್‌ ರೆಕಾರ್ಡ್ಸ್‌
ನಲ್ಲಿ ದಾಖಲೆ ನಿರ್ಮಿಸಲಾಗಿದೆ. ಫೆ.4ರಂದು ಇಂಡಿಯಾ ಬುಕ್ ಆಫ್‌ ರೆಕಾರ್ಡ್ಸ್‌ನವರು ಈ ಸಾಧನೆಯನ್ನು ದೃಢೀಕರಿಸಿದ್ದಾರೆ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT