ADVERTISEMENT

ಬಳ್ಳಾರಿ | ಸಿಡಿಲು ಬಡಿದು ರೇಷ್ಮೆ ಮನೆ ಭಸ್ಮ

​ಪ್ರಜಾವಾಣಿ ವಾರ್ತೆ
Published 10 ಮೇ 2023, 4:14 IST
Last Updated 10 ಮೇ 2023, 4:14 IST
   

ಕಾನಹೊಸಹಳ್ಳಿ: ಸಮೀಪದ ಹುಲಿಕೆರೆ ಗ್ರಾಮದಲ್ಲಿ ಸಿಡಿಲು ಬಡಿದು ರೇಷ್ಮೆ ಸಾಕಾಣೆ ಮನೆ ಹಾಗೂ ಮೇವಿನ ಬಣವೆಗೆ ಅಕಸ್ಮಿಕ ಬೆಂಕಿ ತಗಲಿ ಸುಟ್ಟುಭಸ್ಮವಾಗಿರುವ ಘಟನೆ ಮಂಗಳವಾರ ರಾತ್ರಿ ಜರುಗಿದೆ.

ಗ್ರಾಮದ ಗಂಗಮ್ಮ ಎಂಬುವ ತೋಟದಲ್ಲಿ ಸಂಗ್ರಹಿಸಿ ಇಟ್ಟಿದ್ದ ಮೇವಿನ ಬಣವೆಗೆ ಸಿಡಿಲಿನಿಂದ ಬೆಂಕಿ ಅವರಿಸಿದ್ದು ನಂತರ ಪಕ್ಕದಲ್ಲಿದ್ದ ರೇಷ್ಮೆ ಸಾಕಾಣೆ ಮಾಡಲು ನಿರ್ಮಿಸಿದ್ದ ಮನೆಗೆ ಬೆಂಕಿ ಅವರಿಸಿ ಸುಟ್ಟುಭಸ್ಮವಾಗಿದೆ.

ಸದ್ಯ ರೇಷ್ಮೆ ಮನೆಯಲ್ಲಿದ್ದ 200 ಮೊಟ್ಟೆಯ ರೇಷ್ಮೆ ಹುಳದ ಬೆಳೆ ನಾಶವಾಗಿ ಸಾವಿರಾರು ರೂ ನಷ್ಟವಾಗಿದೆ ಎಂದು ಕಾನಹೊಸಹಳ್ಳಿ ಕಂದಾಯ ನಿರೀಕ್ಷಕ ತಿಪ್ಪೇಸ್ವಾಮಿ ತಿಳಿಸಿದ್ದಾರೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.