ADVERTISEMENT

ಜಿಲ್ಲೆಯಲ್ಲಿ 22 ಮದ್ಯವರ್ಜನ ಶಿಬಿರ: ಅಕ್ಷತಾ

​ಪ್ರಜಾವಾಣಿ ವಾರ್ತೆ
Published 10 ಫೆಬ್ರುವರಿ 2020, 14:26 IST
Last Updated 10 ಫೆಬ್ರುವರಿ 2020, 14:26 IST
ಧರ್ಮಸ್ಥಳಕ್ಕೆ ತೆರಳಿದ ನವಜೀವನ ಸಮಿತಿ ಸದಸ್ಯರು.
ಧರ್ಮಸ್ಥಳಕ್ಕೆ ತೆರಳಿದ ನವಜೀವನ ಸಮಿತಿ ಸದಸ್ಯರು.   

ದೇವನಹಳ್ಳಿ: ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಸಂಸ್ಥೆ 2014 ರಲ್ಲಿ ಜಿಲ್ಲೆಗೆ ಪಾದರ್ಪಣೆ ಮಾಡಿದ ನಂತರ 22 ಮದ್ಯವರ್ಜನ ಶಿಬಿರ ನಡೆಸಲಾಗಿದೆ ಎಂದು ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಯೋಜನಾಧಿಕಾರಿ ಅಕ್ಷತಾ ರೈ ಹೇಳಿದರು.

ಇಲ್ಲಿನ ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಆಡಳಿತ ಕಚೇರಿ ಮುಂಭಾಗ ಮದ್ಯಪಾನ ವ್ಯಸನ ಮುಕ್ತರಾದ ಕುಟುಂಬಗಳಿಗೆ ಶ್ರೀಕ್ಷೇತ್ರ ಧರ್ಮಸ್ಥಳದಲ್ಲಿ ಫೆ.11 ರಂದು ನಡೆಯಲಿರುವ ನವಜೀವನಕ್ಕೆ ಕಾಲಿಟ್ಟ ವ್ಯಸನಮುಕ್ತ ಸಾಧಕರ ಸಮಾವೇಶ ಮತ್ತು ಶತದಿನೋತ್ಸವ ಕಾರ್ಯಕ್ರಮಕ್ಕೆ ತೆರಳಲು ಹಸಿರು ನಿಶಾನೆ ಕೋರಿದ ನಂತರ ಮಾಹಿತಿ ನೀಡಿದರು.

ಪ್ರಸ್ತುತ 250 ಮದ್ಯ ವ್ಯಸನ ಮುಕ್ತರು ಜಿಲ್ಲೆಯಿಂದ ತೆರಳುತ್ತಿದ್ದು ಅವರಿಗೆಲ್ಲರಿಗೂ ವ್ಯಸನ ಮುಕ್ತ ಪ್ರಮಾಣ ಪತ್ರ ನೀಡಲಾಗುತ್ತಿದೆ. ಕುಡಿದ ಅಮಲಿನಲ್ಲಿ ಯಾವ ರೀತಿ ಆರ್ಥಿಕ ನಷ್ಟ, ವಿವಿಧ ರೋಗಗಳ ಬಾಧೆ, ಸಮಾಜ ನೋಡುವ ರೀತಿ ಈಗ ಅರ್ಥವಾಗಿದೆ ಎಂದು ಹೇಳಿದರು.

ADVERTISEMENT

ಜಿಲ್ಲೆಯಲ್ಲಿ ಈವರೆಗೆ 13,052ಮಹಿಳಾ ಸ್ವಸಹಾಯ ಸಂಘಗಳನ್ನು ರಚಿಸಲಾಗಿದೆ. 1.3 ಲಕ್ಷ ಸಂಘದಲ್ಲಿ ಸಕ್ರಿಯ ಸದಸ್ಯರಿದ್ದಾರೆ. ದೇವನಹಳ್ಳಿ ತಾಲ್ಲೂಕಿನಲ್ಲಿ 28 ಸಾವಿರ ಸದಸ್ಯರಿದ್ದಾರೆ. ಸಾಮಾಜಿಕ, ಆರ್ಥಿಕ, ಧಾರ್ಮಿಕ ಸಮಾನತೆ ಸಿಗಬೇಕು ಎಂಬ ದೃಢ ಸಂಕಲ್ಪವನ್ನಿಟ್ಟುಕೊಂಡು ಗ್ರಾಮಾಭಿವೃದ್ಧಿ ಯೋಜನೆಗೆ ಹೆಚ್ಚಿನ ಒತ್ತು ನೀಡಲಾಗುತ್ತಿದೆ ಎಂದು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.