ADVERTISEMENT

ದೇವನಹಳ್ಳಿ ಬಳಿ ಟೋಲ್ ಪ್ಲಾಜಾಗೆ ಗುದ್ದಿದ ಬಸ್: ನಾಲ್ವರಿಗೆ ಗಂಭೀರ ಗಾಯ

​ಪ್ರಜಾವಾಣಿ ವಾರ್ತೆ
Published 2 ಜನವರಿ 2026, 8:32 IST
Last Updated 2 ಜನವರಿ 2026, 8:32 IST
   

ದೇವನಹಳ್ಳಿ: ಹೈದರಾಬಾದ್‌ನಿಂದ ಮೈಸೂರಿಗೆ ತೆರಳುತ್ತಿದ್ದ ಖಾಸಗಿ ಬಸ್ ಒಂದು ಸಾದಹಳ್ಳಿ ಸಮೀಪದ ನಿರುಪಯುಕ್ತ ಟೋಲ್ ಪ್ಲಾಜಾಗೆ ಡಿಕ್ಕಿ ಹೊಡೆದು ಅಪಘಾತ ಸಂಭವಿಸಿದೆ. ನಾಲ್ವರು ಗಂಭೀರವಾಗಿ ಗಾಯಗೊಂಡಿದ್ದಾರೆ.

ಗುರುವಾರ ತಡರಾತ್ರಿ ನಡೆದ ಈ ಘಟನೆಯಲ್ಲಿ ಬಸ್‌ ಚಾಲಕ ಸೇರಿದಂತೆ ನಾಲ್ವರು ಪ್ರಯಾಣಿಕರು ಗಂಭೀರವಾಗಿ ಗಾಯಗೊಂಡಿದ್ದು, ಅವರನ್ನು ದೇವನಹಳ್ಳಿ ಆಕಾಶ್ ಆಸ್ಪತ್ರೆಗೆ ದಾಖಲಿಸಲಾಗಿದೆ.

ಸಾದಹಳ್ಳಿ ಬಳಿಯ ಟೋಲ್ ಪ್ಲಾಜಾದ ಕ್ಯಾಬಿನ್‌ಗಳಿಗೆ ಯಾವುದೇ ರೀತಿಯ ರಿಫ್ಲೆಕ್ಟರ್ ಅಥವಾ ಎಚ್ಚರಿಕೆ ಸೂಚನೆಗಳು ಇರದ ಕಾರಣ, ರಾತ್ರಿ ವೇಳೆ ಬಸ್‌ ಚಾಲಕ ಟೋಲ್ ಪ್ಲಾಜಾ ಇದ್ದುದನ್ನು ಗಮನಿಸದೆ ಡಿಕ್ಕಿ ಹೊಡೆದಿದ್ದಾರೆ.

ADVERTISEMENT

ಘಟನೆಯ ಸ್ಥಳಕ್ಕೆ ಭೇಟಿ ನೀಡಿದ ಪೊಲೀಸರು ಮತ್ತು ಅಧಿಕಾರಿಗಳು, ಟೋಲ್‌ ನಿರ್ವಹಣೆಯಲ್ಲಿನ ಅಜಾಗರೂಕತೆ ಪರಿಶೀಲಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.