ADVERTISEMENT

ಒಟಿಪಿ ಆಧಾರಿತ ಪಡಿತರ ವಿತರಣೆಗೆ ಜಿಲ್ಲಾಧಿಕಾರಿ ಸೂಚನೆ

​ಪ್ರಜಾವಾಣಿ ವಾರ್ತೆ
Published 28 ಮೇ 2021, 4:49 IST
Last Updated 28 ಮೇ 2021, 4:49 IST
ಆನೇಕಲ್ ತಾಲ್ಲೂಕಿನ ಶಿವನಹಳ್ಳಿ ಸರ್ವೆ ನಂ. 69ರ ಜಮೀನಿನ ಸರ್ವೆ ಕಾರ್ಯದಲ್ಲಿ ತಹಶೀಲ್ದಾರ್ ಪಿ. ದಿನೇಶ್ ಪಾಲ್ಗೊಂಡಿದ್ದರು
ಆನೇಕಲ್ ತಾಲ್ಲೂಕಿನ ಶಿವನಹಳ್ಳಿ ಸರ್ವೆ ನಂ. 69ರ ಜಮೀನಿನ ಸರ್ವೆ ಕಾರ್ಯದಲ್ಲಿ ತಹಶೀಲ್ದಾರ್ ಪಿ. ದಿನೇಶ್ ಪಾಲ್ಗೊಂಡಿದ್ದರು   

ದೇವನಹಳ್ಳಿ: ಕೋವಿಡ್ ಎರಡನೇ ಅಲೆ ಹಿನ್ನೆಲೆಯಲ್ಲಿ ಬೆಂಗಳೂರು ಗ್ರಾಮಾಂತರ ಜಿಲ್ಲೆಯಲ್ಲಿ ಎಲ್ಲಾ ನ್ಯಾಯಬೆಲೆ ಅಂಗಡಿಗಳಲ್ಲಿ ಆಧಾರ್ ಆಧಾರಿತ ಒಟಿಪಿ ಮೇರೆಗೆ ಪಡಿತರ ವಿತರಿಸಲು ಸೂಚಿಸಲಾಗಿದೆ ಎಂದು ಜಿಲ್ಲಾಧಿಕಾರಿ ಕೆ. ಶ್ರೀನಿವಾಸ್ ತಿಳಿಸಿದ್ದಾರೆ.

ಅಲ್ಫಾಬೆಟಿಕ್(Alphabetic)ನಿಂದ ನ್ಯೂಮರಿಕ್(Numeric)ಗೆ ಪಡಿತರ ಕಾರ್ಡ್‌ ಸಂಖ್ಯೆ ಬದಲಾವಣೆ ಮೇರೆಗೆ ಯಾವುದೇ ಕಾರ್ಡ್‌ದಾರರಿಂದ ಹಣ ಪಡೆಯದೆ ಕಾರ್ಡ್ ಮೇಲೆ ಹೊಸ ಕಾರ್ಡ್ ನಂಬರ್‌ ಬರೆಯಲು ಎಲ್ಲಾ ನ್ಯಾಯಬೆಲೆ ಅಂಗಡಿಗಳಿಗೆ ತಿಳಿಸಿದೆ.

ಅಂತ್ಯೋದಯ ಅನ್ನ(ಎಎವೈ) ಪಡಿತರ ಚೀಟಿಗೆ ಎನ್ಎ‌ಫ್‌ಎಸ್‌ಎ ಯೋಜನೆಯಡಿ ಪ್ರತಿ ಪಡಿತರ ಚೀಟಿಗೆ 20 ಕೆ.ಜಿ ರಾಗಿ ಹಾಗೂ 15 ಕೆ.ಜಿ ಅಕ್ಕಿ ಹಾಗೂ ಪಿಎಂಜಿಕೆವೈ ಯೋಜನೆಯಡಿ ಪ್ರತಿ ಕುಟುಂಬ ಸದಸ್ಯರಿಗೆ(1 ಯೂನಿಟ್)ಗೆ 5 ಕೆ.ಜಿ ಅಕ್ಕಿಯನ್ನು ಉಚಿತವಾಗಿ ನೀಡಲಾಗುತ್ತದೆ.

ADVERTISEMENT

ಪಿಎಚ್‌ಎಚ್ (ಬಿಪಿಎಲ್) ಪಡಿತರ ಚೀಟಿಗೆ ಎನ್ಎ‌ಫ್ಎ‌ಸ್‌ಎ ಯೋಜನೆಯಡಿ ಪ್ರತಿ ಕುಟುಂಬದ ಸದಸ್ಯರಿಗೆ(1 ಯೂನಿಟ್) 3 ಕೆ.ಜಿ ರಾಗಿ ಹಾಗೂ 2 ಕೆ.ಜಿ ಅಕ್ಕಿ ಹಾಗೂ ಪಿಎಂಜಿಕೆವೈ ಯೋಜನೆಯಡಿ ಪ್ರತಿ ಕುಟುಂಬ ಸದಸ್ಯರಿಗೆ(1 ಯೂನಿಟ್)ಗೆ 5 ಕೆ.ಜಿ ಅಕ್ಕಿ ಉಚಿತ‌ ನೀಡಲಾಗುತ್ತದೆ.

ಹೊಸ ಪಡಿತರ ಚೀಟಿ(ಪಿಎಚ್‌ಎಚ್‌)ಗೆ ಅರ್ಜಿ ಸಲ್ಲಿಸಿದ ಅರ್ಜಿದಾರರಿಗೆ ಪ್ರತಿ ಅರ್ಜಿಗೆ ಉಚಿತವಾಗಿ 10 ಕೆ.ಜಿ ಅಕ್ಕಿ ಮತ್ತು ಹೊಸ ಪಡಿತರ ಚೀಟಿ (ಎನ್‌ಪಿಎಚ್‌ಎಚ್)ಗೆ ಅರ್ಜಿ ಸಲ್ಲಿಸಿದ ಅರ್ಜಿದಾರರಿಗೆ ಪ್ರತಿ ಕೆ.ಜಿ ಅಕ್ಕಿಗೆ ₹ 15ನಂತೆ 10 ಕೆ.ಜಿ. ಅಕ್ಕಿ ಹಾಗೂ ಎನ್‌ಪಿಎಚ್‌ಎಚ್(ಎಪಿಎಲ್) ನೀಡಿರುವ ಪಡಿತರ ಚೀಟಿದಾರರಿಗೆ ಏಕ ಸದಸ್ಯನಿಗೆ 5 ಕೆ.ಜಿ ಅಕ್ಕಿ, ಎರಡು ಮತ್ತು ಹೆಚ್ಚಿನ ಸದಸ್ಯರಿಗೆ 10 ಕೆ.ಜಿ ಅಕ್ಕಿಯನ್ನು ಕೆ.ಜಿಯೊಂದಕ್ಕೆ ₹ 15ನಂತೆ ವಿತರಿಸಲಾಗುತ್ತದೆ ಎಂದು ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.