ADVERTISEMENT

ದೊಡ್ಡಬಳ್ಳಾಪುರ | ನಟ ಸುದೀಪ್ ಜಾಹೀರಾತು ತೆರವು

​ಪ್ರಜಾವಾಣಿ ವಾರ್ತೆ
Published 17 ಏಪ್ರಿಲ್ 2023, 9:22 IST
Last Updated 17 ಏಪ್ರಿಲ್ 2023, 9:22 IST
ನಟ ಸುದೀಪ್‌ ಭಾವಚಿತ್ರ ಇರುವ ಜಾಹೀರಾತು ತೆರವುಗೊಳಿಸಲಾಯಿತು
ನಟ ಸುದೀಪ್‌ ಭಾವಚಿತ್ರ ಇರುವ ಜಾಹೀರಾತು ತೆರವುಗೊಳಿಸಲಾಯಿತು   

ದೊಡ್ಡಬಳ್ಳಾಪುರ: ಬಿಜೆಪಿ ಸ್ಟಾರ್‌ ಪ್ರಚಾರಕ ಆಗಿರುವ ನಟ ಸುದೀಪ್‌ ಭಾವಚಿತ್ರವುಳ್ಳ ಜಾಹೀರಾತುಗಳನ್ನು ತಾಲ್ಲೂಕಿನಲ್ಲಿ ಭಾನುವಾರ ತೆರವುಗೊಳಿಸಲಾಯಿತು.

ಸರ್ಕಾರಿ, ಖಾಸಗಿ ಆಸ್ತಿ, ಪೊಲೀಸ್ ಬ್ಯಾರಿಕೇಡ್‌ ಸೇರಿದಂತೆ ಸುದೀಪ್ ಭಾವಚಿತ್ರವುಳ್ಳ ಜಾಹೀರಾತುಗಳನ್ನು ತೆರವುಗೊಳಿಸಲಾಗಿದೆ.

ನಟ ಸುದೀಪ್ ಅವರು ಪ್ರಸ್ತುತ ಬಿಜೆಪಿಯ ಸ್ಟಾರ್ ಪ್ರಚಾರಕರಾಗಿ ಗುರುತಿಸಿಕೊಂಡಿದ್ದಾರೆ. ಆದ್ದರಿಂದ ಅವರ ಸಿನಿಮಾ, ಜಾಹೀರಾತು, ಪೋಸ್ಟರ್ ಮುಂತಾದುವುಗಳು ಬಿತ್ತರಿಸುವ ಮೂಲಕ ಮತದ ಮೇಲೆ ಪ್ರಭಾವ ಬೀರುತ್ತೆ ಎಂದು ಎಐಸಿಸಿ ಪ್ರಧಾನ ಕಾರ್ಯದರ್ಶಿ ರಣದೀಪ್ ಸಿಂಗ್ ಸುರ್ಜೇವಾಲಾ ಹಾಗೂ ಜೆಡಿಎಸ್ ಮುಖಂಡರು ಪ್ರತ್ಯೇಕವಾಗಿ ಚುನಾವಣೆ ಆಯೋಗಕ್ಕೆ ದೂರು ನೀಡಿದ್ದರು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.