ADVERTISEMENT

ಭೀಕರ ಅಪಘಾತ: ಮೂವರು ಸಾವು

​ಪ್ರಜಾವಾಣಿ ವಾರ್ತೆ
Published 17 ಸೆಪ್ಟೆಂಬರ್ 2021, 4:21 IST
Last Updated 17 ಸೆಪ್ಟೆಂಬರ್ 2021, 4:21 IST
ಆನೇಕಲ್ ತಾಲ್ಲೂಕಿನ ಅತ್ತಿಬೆಲೆ ಸಮೀಪದ ರಾಷ್ಟ್ರೀಯ ಹೆದ್ದಾರಿ 7ರ ನೆರಳೂರು ಬಳಿ ಸಂಭವಿಸಿದ ಅಪಘಾತದಲ್ಲಿ ನಜ್ಜುಗುಜ್ಜಾಗಿರುವ ವಾಹನ
ಆನೇಕಲ್ ತಾಲ್ಲೂಕಿನ ಅತ್ತಿಬೆಲೆ ಸಮೀಪದ ರಾಷ್ಟ್ರೀಯ ಹೆದ್ದಾರಿ 7ರ ನೆರಳೂರು ಬಳಿ ಸಂಭವಿಸಿದ ಅಪಘಾತದಲ್ಲಿ ನಜ್ಜುಗುಜ್ಜಾಗಿರುವ ವಾಹನ   

ಆನೇಕಲ್: ತಾಲ್ಲೂಕಿನ ಅತ್ತಿಬೆಲೆ ಸಮೀಪದ ರಾಷ್ಟ್ರೀಯ ಹೆದ್ದಾರಿ 7ರ ನೆರಳೂರು ಬಳಿ ಗುರುವಾರ ಮುಂಜಾನೆಆಂಬುಲೆನ್ಸ್‌ ಮತ್ತು ಲಾರಿ ನಡುವೆ ಸಂಭವಿಸಿದ ಅಪಘಾತದಲ್ಲಿ ರೋಗಿ, ವೈದ್ಯ ಸೇರಿದಂತೆ ಮೂವರು ಮೃತಪಟ್ಟಿದ್ದಾರೆ.

ಮಹಾರಾಷ್ಟ್ರ ಮೂಲದ ನಾಸಿಕ್‌ನ ಡಾ.ಜಾಧವ್‌ ಅಶೋಕ್(35), ಚೆನ್ನೈ ಮೂಲದ ಅನ್ವರ್‌ ಖಾನ್‌(68) ಮತ್ತು ಆಂಬುಲೆನ್ಸ್‌ ಸಹ ಚಾಲಕ ಬಬಿಯಾ(40) ಮೃತಪಟ್ಟವರು.

ಚೆನ್ನೈನ ಅನ್ವರ್‌ ಖಾನ್‌ ಎಂಬುವರು ಪಾರ್ಶ್ವವಾಯು ಪೀಡಿತರಾಗಿದ್ದು ಹೆಚ್ಚಿನ ಚಿಕಿತ್ಸೆಗಾಗಿ ಮುಂಬೈನ ಕಲ್ಯಾಣ್‌ನಿಂದ ಚೆನ್ನೈಗೆ ಆಂಬುಲೆನ್ಸ್‌ ಮೂಲಕ ಕರೆದೊಯ್ಯಲಾಗುತ್ತಿತ್ತು. ಈ ಸಂದರ್ಭದಲ್ಲಿ ಅತ್ತಿಬೆಲೆ ಸಮೀಪದ ನೆರಳೂರು ಬಳಿ ಆಂಬುಲೆನ್ಸ್‌ ಮತ್ತು ಲಾರಿ ನಡುವೆ ಅಪಘಾತ ಸಂಭವಿಸಿದೆ.

ADVERTISEMENT

ಅಪಘಾತದಲ್ಲಿ ವೈದ್ಯ ಡಾ.ಜೀತೇಂದ್ರ ಬಿರಾದಾರ್‌, ರೋಗಿಯ ಸಹೋದರ ಯುಸೂಫ್‌ ಖಾನ್‌, ಅಹ್ಮದ್‌ ರಾಜ್‌ಶೇಖ್‌ ಮತ್ತು ಆಂಬುಲೆನ್ಸ್‌ ಚಾಲಕ ಆಸ್ಕನ್ ಮೆನನ್‌ ಎಂಬುವರು ಗಾಯಗೊಂಡಿದ್ದಾರೆ.

ಆಂಬುಲೆನ್ಸ್‌ ಚಾಲಕ ಲಾರಿಯನ್ನು ಹಿಂದಿಕ್ಕಿ ಮುಂದೆ ತೆರಳುವ ವೇಳೆಯಲ್ಲಿ ಲಾರಿಗೆ ಡಿಕ್ಕಿ ಹೊಡೆದ ಪರಿಣಾಮ ಈ ಅಪಘಾತ ಸಂಭವಿಸಿದೆ ಎಂದು ಸ್ಥಳೀಯರು ತಿಳಿಸಿದರು.

ಅತ್ತಿಬೆಲೆ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.