ADVERTISEMENT

ಹೊಸಕೋಟೆ: ಹೆಡಕನಹಳ್ಳಿ ಡೇರಿ ಕಾಂಗ್ರೆಸ್ ತೆಕ್ಕೆಗೆ

​ಪ್ರಜಾವಾಣಿ ವಾರ್ತೆ
Published 21 ಜುಲೈ 2023, 14:04 IST
Last Updated 21 ಜುಲೈ 2023, 14:04 IST
ಹೊಸಕೋಟೆ ತಾಲ್ಲೂಕಿನ ಹೆಡಕನಹಳ್ಳಿ ಗ್ರಾಮದ ಡೇರಿಗೆ ನೂತನವಾಗಿ ಆಯ್ಕೆಯಾದ ನಿರ್ದೇಶಕರಿಗೆ ಅಭಿನಂದಿಸಿದ ಮುಖಂಡರು.
ಹೊಸಕೋಟೆ ತಾಲ್ಲೂಕಿನ ಹೆಡಕನಹಳ್ಳಿ ಗ್ರಾಮದ ಡೇರಿಗೆ ನೂತನವಾಗಿ ಆಯ್ಕೆಯಾದ ನಿರ್ದೇಶಕರಿಗೆ ಅಭಿನಂದಿಸಿದ ಮುಖಂಡರು.   

ಹೊಸಕೋಟೆ: ತಾಲ್ಲೂಕಿನ ನಂದಗುಡಿ ಹೋಬಳಿಯ ಬೈಲನರಸಾಪುರ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಹೆಡಕನಹಳ್ಳಿ ಹಾಲು ಉತ್ಪಾದಕರ ಸಹಕಾರ ಸಂಘಕ್ಕೆ ನಡೆದ ನಿರ್ದೇಶಕರ ಚುನಾವಣೆಯಲ್ಲಿ ಕಾಂಗ್ರಸ್ ಬೆಂಬಲಿತ 11 ಮಂದಿ ಆಯ್ಕೆಯಾಗಿದ್ದಾರೆ.

ಸಾಮಾನ್ಯ ಕ್ಷೇತ್ರದಿಂದ ಸ್ಪರ್ಧಿಸಿ ಎಚ್.ಎನ್.ಬೈರೇಗೌಡ, ಶ್ರೀನಿವಾಸ್, ಎಚ್.ಸಿ.ಬೈರೇಗೌಡ, ಮುನಿರಾಜು, ಎಚ್.ಜೆ.ರಾಜೇಶ್, ಮಂಜುನಾಥ್‌, ಮಹಿಳಾ ಮೀಸಲು ಸ್ಥಾನದಿಂದ ಸಂಗೀತಾ, ವೆಂಕಟಲಕ್ಷ್ಮಮ್ಮ, ಪರಿಶಿಷ್ಟ ಜಾತಿ ಮೀಸಲು ಸ್ಥಾನದಿಂದ ಸುಜಾತಾ, ಎಸ್ಟಿ ಮೀಸಲು ಸ್ಥಾನದಿಂದ ಶ್ಯಾಮಲಮ್ಮ, ಹಿಂದುಳಿದ ವರ್ಗ ಬಿ ಮೀಸಲು ಸ್ಥಾನದಿಂದ ಎಚ್.ವಿ.ಪ್ರಕಾಶ್ ಆಯ್ಕೆಯಾಗಿದ್ದಾರೆ.

ಗ್ರಾಮ ಪಂಚಾಯಿತಿ‌ ಸದಸ್ಯರಾದ ಎನ್.ಎನ್.ಮಂಜುನಾಥ್, ಗುರು, ಬೈರೇಗೌಡ, ಮುಖಂಡರಾದ ಚಿನ್ನಯ್ಯಪ್ಪ, ವೆಲ್ಡಿಂಗ್ ರವಿ, ಎಚ್.ಎನ್.ನಾಗರಾಜು, ಎಚ್.ಎನ್.ಮಂಜುನಾಥ್, ಡೇರಿ ಮುಖ್ಯ ಕಾರ್ಯನಿರ್ವಾಹಕಾಧಿಕಾರಿ ಎಚ್.ದಿವಾಕರ್ ಇದ್ದರು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.