ADVERTISEMENT

ಸಾವಿನಲ್ಲಿಯೂ ಒಂದಾದ ತಾಯಿ ಮಗ

​ಪ್ರಜಾವಾಣಿ ವಾರ್ತೆ
Published 9 ಜುಲೈ 2020, 9:59 IST
Last Updated 9 ಜುಲೈ 2020, 9:59 IST
ಸರಸ್ವತಮ್ಮ, ಪುಟ್ಟರಾಜು
ಸರಸ್ವತಮ್ಮ, ಪುಟ್ಟರಾಜು   

ದೊಡ್ಡಬಳ್ಳಾಪುರ: ನಗರದ ಕೆ.ಆರ್.ಮಾರುಕಟ್ಟೆ ಪ್ರದೇಶದ ನಿವಾಸಿಗಳಾದ ಸರಸ್ವತಮ್ಮ(78) ಪುಟ್ಟರಾಜು (55)ತಾಯಿ ಮತ್ತು ಮಗ ಒಂದೇ ದಿನ ಮೃತಪಟ್ಟಿರುವ ಘಟನೆ ಬುಧವಾರ ಬೆಳಗಿನ ಜಾವ ನಡೆದಿದೆ.

ನೇಕಾರರಾದ ಪುಟ್ಟರಾಜು ಅವರು ಬುಧವಾರ ಬೆಳಗಿನ ಜಾವ ಹೃದಯಾಘಾತದಿಂದ ಮೃತಪಟ್ಟಿದ್ದಾರೆ. ಅನಾರೋಗ್ಯದಿಂದ ಬಳಲುತ್ತಿದ್ದ ಸರಸ್ವತಮ್ಮ ಅದೇ ವೇಳೆಗೆ ಮೃತಪಟ್ಟರು. ಸರಸ್ವತಮ್ಮ ಅವರಿಗೆ ಪತಿ, ಮೂವರು ಹೆಣ್ಣು, ಇಬ್ಬರು ಪುತ್ರರು ಇದ್ದಾರೆ. ಮೃತ ಪುಟ್ಟರಾಜು ಇವರ ಜೇಷ್ಟಪುತ್ರ. ಪುಟ್ಟರಾಜು ಅವರಿಗೆ ಪತ್ನಿ ಹಾಗೂ ಮೂವರು ಹೆಣ್ಣು ಮಕ್ಕಳು ಇದ್ದಾರೆ. ಮೃತರ ಅಂತ್ಯಕ್ರಿಯೆ ನಗರದ ಮುಕ್ತಿಧಾಮದಲ್ಲಿ ನೆರವೇರಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT