ADVERTISEMENT

ಆನೇಕಲ್ | ಹೈಡ್ರಾಲಿಕ್‌ ಪೈಪ್‌ ಕುಸಿದು ಚಾಲಕ ಸಾವು

​ಪ್ರಜಾವಾಣಿ ವಾರ್ತೆ
Published 24 ಮೇ 2023, 5:08 IST
Last Updated 24 ಮೇ 2023, 5:08 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ಆನೇಕಲ್ : ಟಿಪ್ಪರ್ ಲಾರಿ ಹೈಡ್ರಾಲಿಕ್‌ ಕೆಟ್ಟಿದ್ದು ರಿಪೇರಿ ಮಾಡುವ ಸಂದರ್ಭದಲ್ಲಿ ಹೈಡ್ರಾಲಿಕ್‌ ಪೈಪ್‌ ಕುಸಿದು ಬಿದ್ದಿದ್ದರಿಂದ ಚಾಸಿ ಮತ್ತು ಟಿಪ್ಪರ್‌ ನಡುವೆ ಸಿಲುಕಿ ಚಾಲಕ ಮೃತಪಟ್ಟಿರುವ ಘಟನೆ ತಾಲ್ಲೂಕಿನ ಬನ್ನೇರುಘಟ್ಟದಲ್ಲಿ ಮಂಗಳವಾರ ನಡೆದಿದೆ.

ಮೃತಪಟ್ಟ ಚಾಲಕನನ್ನು ನಟರಾಜ್‌(35) ಎಂದು ಗುರುತಿಸಲಾಗಿದೆ. ಬನ್ನೇರುಘಟ್ಟ ಸಮೀಪದ ಜಲ್ಲಿ ಮಿಷನ್‌ನಲ್ಲಿ ವಾಸವಾಗಿದ್ದ ನಟರಾಜ್‌ ಈಶ್ವರ್‌ ಎಂಬುವವರ ಬಳಿ ಟಿಪ್ಪರ್‌ ಲಾರಿ ಚಾಲಕರಾಗಿ ಕೆಲಸ ಮಾಡುತ್ತಿದ್ದರು.

ಮಂಗಳವಾರ ಟಿಪ್ಪರ್‌ ಲಾರಿ ಹೈಡ್ರಾಲಿಕ್‌ ಕೆಟ್ಟಿದ್ದರಿಂದ ಸರಿಪಡಿಸಲು ಮೆಕಾನಿಕಲ್‌ ಬಳಿ ತಂದಿದ್ದಾಗ ರಿಪೇರಿ ಸಂದರ್ಭದಲ್ಲಿ ಹೈಡ್ರಾಲಿಕ್‌ಗೆ ಸಂಪರ್ಕ ಕಲ್ಪಿಸುವ ಪೈಪ್‌ ಜಾರಿದ್ದರಿಂದ ಚಾಸಿ ಮತ್ತು ಟಿಪ್ಪರ್‌ ನಡುವೆ ಸಿಲುಕಿ ನಟರಾಜ್‌ ಸ್ಥಳದಲ್ಲೇ ಮೃತಪಟ್ಟಿದ್ದಾರೆ.

ADVERTISEMENT

ಬನ್ನೇರುಘಟ್ಟ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಂಡು, ಮುಂದಿನ ಕ್ರಮ ಕೈಗೊಂಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.