ADVERTISEMENT

ಸ್ವಚ್ಛತೆ, ಪರಿಸರ ಸಂರಕ್ಷಣೆಗೆ ಆದ್ಯತೆ ನೀಡಿ 

​ಪ್ರಜಾವಾಣಿ ವಾರ್ತೆ
Published 12 ಫೆಬ್ರುವರಿ 2020, 14:11 IST
Last Updated 12 ಫೆಬ್ರುವರಿ 2020, 14:11 IST
ಕಸ ವಿಲೇವಾರಿ ಡಬ್ಬ ವಿತರಣೆ ಕಾರ್ಯಕ್ರಮದಲ್ಲಿ ಕೆ.ಸಿ.ಮಂಜುನಾಥ್ ಉಪಸ್ಥಿತರಿದ್ದರು .
ಕಸ ವಿಲೇವಾರಿ ಡಬ್ಬ ವಿತರಣೆ ಕಾರ್ಯಕ್ರಮದಲ್ಲಿ ಕೆ.ಸಿ.ಮಂಜುನಾಥ್ ಉಪಸ್ಥಿತರಿದ್ದರು .   

ದೇವನಹಳ್ಳಿ: ಗ್ರಾಮ ಪಂಚಾಯಿತಿ ವ್ಯಾಪ್ತಿಗಳಲ್ಲಿ ಸ್ವಚ್ಛತೆ ಮತ್ತು ಪರಿಸರ ಸಂರಕ್ಷಣೆಗೆ ಆದ್ತೆಯ ನೀಡುವ ಅಗತ್ಯವಿದೆ ಎಂದು ಜಿಲ್ಲಾ ಪಂಚಾಯಿತಿ ಸಾಮಾಜಿಕ ನ್ಯಾಯಸ್ಥಾಯಿ ಸಮಿತಿ ಅಧ್ಯಕ್ಷ ಕೆ.ಸಿ.ಮಂಜುನಾಥ್ ಹೇಳಿದರು.

ಇಲ್ಲಿನ ಆಲೂರು ದುದ್ದನಹಳ್ಳಿ ಗ್ರಾಮ ಪಂಚಾಯಿತಿ ಆವರಣದಲ್ಲಿ ಒಣ ಮತ್ತು ಹಸಿ ಕಸ ವಿಲೇವಾರಿಗೆ ಡಬ್ಬಗಳ ವಿತರಣೆ ಮತ್ತು ವಿಕಲ ಚೇತನರಿಗೆ ವಿವಿಧ ಪರಿಕರ ವಿತರಣೆ ಕಾರ್ಯಕ್ರಮದಲ್ಲಿ ಮಾತನಾಡಿದರು.

‘ಗ್ರಾಮಗಳಲ್ಲಿರುವ ವಾಸದ ಮನೆಯ ಸುತ್ತಮುತ್ತ ಕಸಹಾಕದೆ ಹಸನು ಮಾಡಿ ಗಿಡ ಮರ, ಸೊಪ್ಪು ತರಕಾರಿಗಳನ್ನು ಬೆಳೆಸಿದರೆ ತಾಜಾ ತರಕಾರಿ ಉಪಯೋಗಿಸಿಕೊಳ್ಳಬಹುದು. ಗಿಡ ಮರಗಳಿಂದ ಪರಿಸರ ಸಂರಕ್ಷಣೆ ಆಗಲಿದೆ. ದಿನನಿತ್ಯ ಬಳಕೆ ಮಾಡುವ ವ್ಯರ್ಥ ನೀರನ್ನೆ ಉಪಯೋಗಿಸಿದರೆ ಸಾಕು’ ಎಂದು ಹೇಳಿದರು.

ADVERTISEMENT

‘ಪಂಚಾಯಿತಿ ವ್ಯಾಪ್ತಿಯಲ್ಲಿ ಸರ್ಕಾರದ ಅನುದಾನ ಮತ್ತು ಕ್ರೋಡೀಕರಣಗೊಂಡ ಅನುದಾನದಲ್ಲಿ ಶೇ 5ರಷ್ಟು ಕಡ್ಡಾಯವಾಗಿ ಅಂಗವಿಕಲರಿಗೆ ಬಳಕೆಯಾಗಲೇಬೇಕು. ಪರಿಶಿಷ್ಟ ಜಾತಿ ಮತ್ತು ಪಂಗಡದವರಿಗೆ ಮೀಸಲಿಟ್ಟ ಅನುದಾನಗಳು ಸದ್ಬಳಕೆಯಾಗಬೇಕು’ ಎಂದು ಹೇಳಿದರು.

ತಾಲ್ಲೂಕು ಪಂಚಾಯಿತಿ ಅಧ್ಯಕ್ಷೆ ಚೈತ್ರಾ ಮಾತನಾಡಿ, ‘ಸ್ವಚ್ಛತೆ ಬರೀ ನಗರಗಳಿಗೆ ಅನ್ವಯಿಸಬಾರದು. ಮಾರಕರೋಗಗಳು ಎಲ್ಲಿ ಬೇಕಾದರೂ ಆರಂಭವಾಗಬಹುದು. ನಮ್ಮ ಮನೆಯ ಸುತ್ತ ಮತ್ತು ಜಾಗ ಮತ್ತು ನೀರು ಹರಿಯು ಚರಂಡಿಗಳನ್ನು ನಾವೇ ಸ್ವಚ್ಛ ಮಾಡುವುದರಲ್ಲಿ ತಪ್ಪೇನಿದೆ? ಬರಿ ಗ್ರಾಮ ಪಂಚಾಯಿತಿ ಸಿಬ್ಬಂದಿಯನ್ನೆ ಅವಲಂಬಿಸಬಾರದು’ ಎಂದು ಹೇಳಿದರು.

ಗ್ರಾಮ ಪಂಚಾಯಿತಿ ಅಧ್ಯಕ್ಷೆ ಗೌರಮ್ಮ, ಉಪಾಧ್ಯಕ್ಷೆ ಪಿಳ್ಳಮ್ಮ, ಸದಸ್ಯರಾದ ರೇಖಾ, ಕದಿರಪ್ಪ, ಮುನೇಗೌಡ, ಪಿ.ಹನುಮಂತೇಗೌಡ ,ಲಕ್ಷಣ್, ರಂಗಸ್ವಾಮಿ, ಲಕ್ಷ್ಮಮ್ಮ ,ಗೌರಮ್ಮ ,ನಾಗವೇಣಿ, ಆನಂದಮ್ಮ ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.