ADVERTISEMENT

ಕೆರೆ ಒತ್ತುವರಿ ತೆರವಿಗೆ ಜಿಲ್ಲಾಧಿಕಾರಿ ಸೂಚನೆ

​ಪ್ರಜಾವಾಣಿ ವಾರ್ತೆ
Published 23 ಡಿಸೆಂಬರ್ 2019, 14:28 IST
Last Updated 23 ಡಿಸೆಂಬರ್ 2019, 14:28 IST
ಹೊಸಕೋಟೆಯ ಅಗಸನಕೆರೆ ಒತ್ತುವರಿ ದೂರಿನ ಅನ್ವಯ ಜಿಲ್ಲಾಧಿಕಾರಿ ರವೀಂದ್ರ, ತಹಶೀಲ್ದಾರ್ ಗೀತಾ, ನಗರಸಭೆ ಆಯುಕ್ತ ನಿಸಾರ್ ಅಹಮದ್ ಪರಿಶೀಲಿಸಿದರು
ಹೊಸಕೋಟೆಯ ಅಗಸನಕೆರೆ ಒತ್ತುವರಿ ದೂರಿನ ಅನ್ವಯ ಜಿಲ್ಲಾಧಿಕಾರಿ ರವೀಂದ್ರ, ತಹಶೀಲ್ದಾರ್ ಗೀತಾ, ನಗರಸಭೆ ಆಯುಕ್ತ ನಿಸಾರ್ ಅಹಮದ್ ಪರಿಶೀಲಿಸಿದರು   

ಹೊಸಕೋಟೆ: ಅಗಸನಕೆರೆ ಒತ್ತುವರಿ ಬಗ್ಗೆ ಸಾರ್ವಜನಿಕರ ದೂರಿನ ಮೇರೆಗೆ ಜಿಲ್ಲಾಧಿಕಾರಿ ರವೀಂದ್ರ ನೇತೃತ್ವದ ತಂಡ ವರದಾಪುರ ಹಾಗೂ ನಗರದ ಸಾರ್ವಜನಿಕ ಆಸ್ಪತ್ರೆ ಹಿಂಭಾಗದಲ್ಲಿ ಪರಿಶೀಲನೆ ನಡೆಸಿತು.

ಕೆರೆ ಮತ್ತು ಸರ್ಕಾರಿ ಜಾಗವನ್ನು ತಕ್ಷಣ ಸರ್ವೆ ಮಾಡಿಸಬೇಕು. ಖಾಲಿ ಇರುವ ಜಾಗದಲ್ಲಿ ಬೇಲಿ ಹಾಕಿಸಬೇಕೆಂದು ತಹಶೀಲ್ದಾರ್ ಗೀತಾ ಅವರಿಗೆ ಸೂಚಿಸಿದರು. ಪ್ರತಿನಿತ್ಯ ಈ ಪ್ರದೇಶದಲ್ಲಿ ಪರಿಶೀಲಿಸಿ ಯಾವುದೇ ಹೊಸ ಒತ್ತುವರಿ ಆಗದಂತೆ ಗಮನಿಸುವಂತೆ ನಗರಸಭೆ ಆಯುಕ್ತ ನಿಸಾರ್ ಆಹಮದ್ ಅವರಿಗೆ ಸೂಚಿಸಿದರು.

ಮುಂದಿನ 15 ದಿನಗಳಲ್ಲಿ ಸರ್ವೆ ಕಾರ್ಯ ಮುಗಿಸಿ ಅತಿಕ್ರಮಣ ಮಾಡಿರುವವರಿಗೆ ನೋಟಿಸ್ ನೀಡುವುದಾಗಿ ತಹಶೋಲ್ದಾರ್ ಗೀತಾ ತಿಳಿಸಿದರು. ಸಿಇಒ ಸಯದ್ ಜಾವೀದ್, ಕಂದಾಯ ಇನ್‌ಸ್ಪೆಕ್ಟರ್‌ ಮಲ್ಲಿಕಾರ್ಜುನ್, ಜನಜಾಗೃತಿ ಸಮಿತಿ ರಾಜ್ಯ ಘಟಕದ ಅಧ್ಯಕ್ಷ ವರದಾಪುರ ನಾಗರಾಜ್ ಇದ್ದರು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.