ಐಗಳಿ: ‘ಭಾರತದ ಪ್ರಪ್ರಥಮ ಸ್ವಾತಂತ್ರ್ಯ ಹೋರಾಟಗಾರ್ತಿ ವೀರ ರಾಣಿ ಚನ್ನಮ್ಮನ ಆದರ್ಶವನ್ನು ಜೀವನದಲ್ಲಿ ಅಳವಡಿಸಿಕೊಂಡು, ಸಮಾಜಮುಖಿ ಕಾರ್ಯ ಮಾಡಬೇಕು’ ಎಂದು ಬಸವೇಶ್ವರ ಪಿ.ಕೆ.ಪಿ.ಎಸ್. ಅಧ್ಯಕ್ಷ ಎ.ಬಿ. ನೇಮಗೌಡ ಹೇಳಿದರು.
ಕಿತ್ತೂರು ವಿಜಯೋತ್ಸವ ಅಂಗವಾಗಿ ಇಲ್ಲಿನ ಚನ್ನಮ್ಮ ವೃತ್ತದಲ್ಲಿ ಚನ್ನಮ್ಮ ಫೊಟೊಗೆ ಶುಕ್ರವಾರ ಪೂಜೆ ನೆರವೇರಿಸಿ ಮಾತನಾಡಿದರು.
‘ಬ್ರಿಟಿಷರ ಬಹು ದೊಡ್ಡ ಸೈನ್ಯದ ವಿರುದ್ಧ ಹೋರಾಡಿದದ ಆ ಮಹಿಳೆ ಇಡೀ ಜಗತ್ತಿನಾದ್ಯಂತ ವೀರ ರಾಣಿ ಎನಿಸಿದ್ದಾರೆ’ ಎಂದರು.
ಮುಖಂಡ ಶಿವಾನಂದ ಸಿಂಧೂರ, ‘ಸತತ ಮಳೆಯಿಂದ ಗೋವಿನ ಜೋಳ, ಕಬ್ಬು, ತೊಗರಿ, ದ್ರಾಕ್ಷಿ ಬೆಳೆಗಳು ಸಂಪೂರ್ಣವಾಗಿ ನಾಶವಾಗಿವೆ. ಮೆಕ್ಕೆಜೋಳ ತೆನೆಯಲ್ಲಿ ಮೊಳಕೆಗಳು ಬಂದಿವೆ. ಸರ್ಕಾರ ಅನ್ನದಾತನಿಗೆ ಸಮರ್ಪಕ ಬೆಳೆ ಪರಿಹಾರ ನೀಡಬೇಕು’ ಎಂದು ಒತ್ತಾಯಿಸಿದರು.
ಮುಖಂಡರಾದ ಶಿವನಿಂಗ ಅರಟಾಳ, ಅಪ್ಪಾಸಾಬ ಭೀ. ತೆಲಸಂಗ, ಶಿವಾನಂದ ಪಾಟೀಲ, ಅಣ್ಣಾರಾಯ ಹಾಲಳ್ಳಿ, ಈರಪ್ಪ ಅರಟಾಳ, ಶಂಕರ ಹಿಪ್ಪರಗಿ, ರಾಮು ಹಾಲಳ್ಳಿ, ಅಜೀತ ಜತ್ತಿ, ರವಿ ಹಾಲಳ್ಳಿ, ಮುಲಗೌಡ ಪಾಟೀಲ, ಅಪ್ಪಾಸಾಬ ಮದಬಾವಿ, ಸಿದ್ದು ಮುದಗೌಡರ ಇದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.