ADVERTISEMENT

ಬೈಲಹೊಂಗಲ: ಕಾರು– ಬಸ್ ಡಿಕ್ಕಿ, ಬಸ್ ಚಾಲಕನ ಮೇಲೆ ಹಲ್ಲೆ

​ಪ್ರಜಾವಾಣಿ ವಾರ್ತೆ
Published 26 ಆಗಸ್ಟ್ 2023, 8:49 IST
Last Updated 26 ಆಗಸ್ಟ್ 2023, 8:49 IST
   

ಬೈಲಹೊಂಗಲ: ಪಟ್ಟಣದ ಕೇಂದ್ರ ಬಸ್ ನಿಲ್ದಾಣದ ಬಳಿ ಬಸ್- ಕಾರಿನ ಮಧ್ಯೆ ಡಿಕ್ಕಿ ಸಂಭವಿಸಿದ್ದು, ಇದರಿಂದ ಕೋಪಗೊಂಡ ಕಾರ್ ಮಾಲೀಕ ಬಸ್ ಚಾಲಕನ ಮೇಲೆ ಹಲ್ಲೆ ಮಾಡಿದರು. ಎರಡೂ ವಾಹನಗಳು ರಸ್ತೆಯಲ್ಲಿ ನಿಂತಿದ್ದರಿಂದ ಒಂದು ತಾಸು ಸಂಚಾರ ದಟ್ಟಣೆ ಉಂಟಾಯಿತು.

ಪಟ್ಟಣದ ಕೇಂದ್ರ ಬಸ್ ನಿಲ್ದಾಣದಿಂದ ಪ್ರಯಾಣಿಕರನ್ನು ಹೊತ್ತು ಯರಗಟ್ಟಿಗೆ ತೆರಳುತ್ತಿದ್ದ ಬಸ್ ಸಂಗೊಳ್ಳಿ ರಾಯಣ್ಣ ವೃತ್ತದ ಬಳಿ ಕಾರಿಗೆ ತಾಗಿದೆ. ಇದರಿಂದ ಬಸ್, ಕಾರನ್ನು ನಡು ರಸ್ತೆಯಲ್ಲಿಯೇ ನಿಲ್ಲಿಸಿ ಬಸ್ ಚಾಲಕ, ಕಾರ್ ಮಾಲೀಕ ಪರಸ್ಪರ ವಾಗ್ವಾದ ನಡೆಸಿದರು.

ಆಗ ಕಾರ್ ಮಾಲಿಕ ಬಸ್ ಚಾಲಕನ ಮೇಲೆ ಹಲ್ಲೆ ಮಾಡಿದರು ಎಂದು ಚಾಲಕ ದೂರಿದ್ದಾರೆ.

ADVERTISEMENT

ಹಲ್ಲೆಗೊಳಗಾದ ಬಸ್ ಚಾಲಕ ಬಸ್ ನಿಂತಲ್ಲಿಯೇ ನಿಲ್ಲಿಸಿ ಪೊಲೀಸ್ ಠಾಣೆಗೆ ಧಾವಿಸಿದರು. ವಿಷಯ ತಿಳಿದು ಸ್ಥಳಕ್ಕೆ ಬಂದ ಪೊಲೀಸರು ಕಾರ್ ಮಾಲಿಕರನ್ನು ಸಮಾಧಾನಗೊಳಿಸಿ ರಸ್ತೆ ಮೇಲಿಂದ ಕಾರ್ ತಗೆಯುವಂತೆ ಸೂಚಿಸಿದರು. ನಂತರ ಬಸ್ ಚಾಲಕ ಬಂದು ಬಸ್ ತೆಗೆದರು.

ಈ ವೇಳೆ ಅಧಿಕ ಸಂಖ್ಯೆಯಲ್ಲಿ ಜನ ಸೇರಿದ್ದರು. ಸರದಿ ಸಾಲಿನಲ್ಲಿ ವಾಹನಗಳು ನಿಂತಿದ್ದವು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.