
 ಪ್ರಜಾವಾಣಿ ವಾರ್ತೆ
ಪ್ರಜಾವಾಣಿ ವಾರ್ತೆ
ಚನ್ನಮ್ಮನ ಕಿತ್ತೂರು: ಪಟ್ಟಣದಲ್ಲಿ ಬೈಲಹೊಂಗಲ ಪೊಲೀಸ್ ಉಪವಿಭಾಗದ ಎಲ್ಲ ಠಾಣೆಗಳ ಸಿಬ್ಬಂದಿಯಿಂದ ಗುರುವಾರ ಏಕತಾ ನಡಿಗೆ ಕಾರ್ಯಕ್ರಮ ನಡೆಯಿತು.
ರಾಣಿ ಚನ್ನಮ್ಮನ ವೃತ್ತದಿಂದ ಆರಂಭಗೊಂಡ ನಡಿಗೆ ಗುರುವಾರ ಪೇಟೆ ಮುಖ್ಯ ಬೀದಿಯಲ್ಲಿ ಸಾಗಿ, ಕೋಟೆ ಆವರಣ ತಲುಪಿತು.
ಬೆಳಗಾವಿ ಹೆಚ್ಚುವರಿ ಎಸ್ಪಿ ಎಸ್.ಎನ್.ಶ್ರುತಿ, ಡಿವೈಎಸ್ಪಿ ರವಿ ನಾಯಕ, ವೃತ್ತ ನಿರೀಕ್ಷಕರಾದ ಶಿವಾನಂದ ಗುಡಗನಟ್ಟಿ, ಎಸ್.ಸಿ.ಪಾಟೀಲ, ಪಂಚಾಕ್ಷರಿ ಸಾಲಿಮಠ, ರಾಘವೇಂದ್ರ ಹವಾಲ್ದಾರ, ಉಪನಿರೀಕ್ಷಕರಾದ ಪ್ರವೀಣ ಗಂಗೊಳ, ಪ್ರವೀಣ ಕೋಟೆ, ಗಂಗಾಧರ ಹಂಪನ್ನವರ, ಸುಮಾ ನಾಯಕ, ಗುರುರಾಜ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.