ADVERTISEMENT

ಠಾಕ್ರೆ ಅಪ್ಪ ಬಂದರೂ ಬೆಳಗಾವಿ ಕರ್ನಾಟಕದ್ದೆ: ಮಾಜಿ ಸಚಿವೆ ಲೀಲಾದೇವಿ ಆರ್.ಪ್ರಸಾದ್

​ಪ್ರಜಾವಾಣಿ ವಾರ್ತೆ
Published 31 ಜನವರಿ 2021, 14:41 IST
Last Updated 31 ಜನವರಿ 2021, 14:41 IST
ಲೀಲಾದೇವಿ ಆರ್. ಪ್ರಸಾದ್ (ಸಂಗ್ರಹ ಚಿತ್ರ)
ಲೀಲಾದೇವಿ ಆರ್. ಪ್ರಸಾದ್ (ಸಂಗ್ರಹ ಚಿತ್ರ)   

ಮಿರ್ಜಿ ಅಣ್ಣಾರಾಯ ವೇದಿಕೆ (ಕಾಗವಾಡ): ‘ಮಹಾರಾಷ್ಟ್ರದ ಮುಖ್ಯಮಂತ್ರಿ ಉದ್ಧವ್ ಠಾಕ್ರೆ ಅವರಪ್ಪನೇ ಬರಲಿ. ಬೆಳಗಾವಿ ಎಂದೆಂದಿಗೂ ಕರ್ನಾಟಕದ್ದೆ’ ಎಂದು ಮಾಜಿ ಸಚಿವೆ ಲೀಲಾದೇವಿ ಆರ್. ಪ್ರಸಾದ್ ಗುಡುಗಿದರು.

ಇಲ್ಲಿ ಭಾನುವಾರ ನಡೆದ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಮಾತನಾಡಿದ ಅವರು, ‘ಗಡಿ ವಿವಾದ ಮುಗಿದು ‌ಹೋದ ಅಧ್ಯಾಯ. ಮಹಾಜನ್ ಆಯೋಗದ ವರದಿಯೇ ಅಂತಿಮ. ಇನ್ಮುಂದೆ ನಾವೂ, ಮುಂಬೈ ನಮ್ಮದೇ ಎಂದು ಕೇಳಲು ಶುರು ಮಾಡಬೇಕು. ಚಳವಳಿ ನಡೆಸಬೇಕು. ಆಗ, ಮಹಾರಾಷ್ಟ್ರದ ನಾಯಕರು ಬೆಳಗಾವಿ ಮೊದಲಾದ ಪ್ರದೇಶಗಳನ್ನು ಕೇಳುವುದನ್ನು ನಿಲ್ಲಿಸುತ್ತಾರೆ’ ಎಂದರು.

‘ಬೆಳಗಾವಿ ನಮ್ಮದು ನಮ್ಮದು ಎಂದು ಎಷ್ಟು ದಿನ ಹೇಳುತ್ತಿರಬೇಕು? ಎಲ್ಲರನ್ನೂ ಅಪ್ಪಿಕೊಳ್ಳುವ ಕನ್ನಡಿಗರ ಸೌಜನ್ಯವನ್ನು ‌ದುರ್ಬಳಕೆ ಮಾಡಿಕೊಳ್ಳುವ ಕೆಲಸ ನಡೆಯಬಾರದು. ಕೆಣಕುವವರಿಗೆ ನಾವೂ ಆಗಾಗ ಚುರುಕು ‌ಮುಟ್ಟಿಸಬೇಕು’ ಎಂದು ತಿಳಿಸಿದರು.

ADVERTISEMENT

‘ವ್ಯವಹಾರದಲ್ಲಿ ಮರಾಠಿ ಬಳಸಿ ನಾವು ಹೆದರಿಕೊಳ್ಳಬಾರದು’ ಎಂದು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.