ADVERTISEMENT

ಬೆಳಗಾವಿ | ಮಹಾನಗರ ಪಾಲಿಕೆ ನೂತನ ಆಯುಕ್ತರಾಗಿ ಅಶೋಕ ದುಡಗುಂಟಿ ನೇಮಕ

​ಪ್ರಜಾವಾಣಿ ವಾರ್ತೆ
Published 27 ಜೂನ್ 2023, 14:22 IST
Last Updated 27 ಜೂನ್ 2023, 14:22 IST
ಅಶೋಕ ದುಡಗುಂಟಿ
ಅಶೋಕ ದುಡಗುಂಟಿ   

ಬೆಳಗಾವಿ: ಬೆಳಗಾವಿ ಮಹಾನಗರ ಪಾಲಿಕೆ ನೂತನ ಆಯುಕ್ತರಾಗಿ ಅಶೋಕ ದುಡಗುಂಟಿ ಅವರು ಮಂಗಳವಾರ ಅಧಿಕಾರ ವಹಿಸಿಕೊಂಡರು. ಕೆಲ ವರ್ಷಗಳ ಹಿಂದೆ ಕೂಡ ಅವರೇ ಪಾಲಿಕೆ ಆಯುಕ್ತರಾಗಿದ್ದರು.

ಕಳೆದ 20 ತಿಂಗಳಿಂದ ಪಾಲಿಕೆ ಆಯುಕ್ತರಾಗದ್ದ ಡಾ.ರುದ್ರೇಶ್‌ ಘಾಳಿ ಅವರಿಗೆ ವರ್ಗಾವಣೆಯಾದ ಕಾರಣ, ಅವರ ಸ್ಥಾನಕ್ಕೆ ಅಶೋಕ ಅವರನ್ನು ನಿಯೋಜಿಸಲಾಗಿದೆ. ಇದಕ್ಕೂ ಮುನ್ನ ಅವರು ಹೆಚ್ಚುವರಿ ಜಿಲ್ಲಾಧಿಕಾರಿ ಆಗಿ ಕೆಲಸ ಮಾಡಿದ್ದಾರೆ.

ಅಶೋಕ ಅವರು ಎರಡನೇ ಬಾರಿಗೆ ಬೆಳಗಾವಿ ಪಾಲಿಕೆ ಆಯುಕ್ತರಾಗಿ ಕೆಲ ವರ್ಷಗಳ ಹಿಂದೆ ಕೂಡ ಕೆಲಸ ಮಾಡಿದ್ದಾರೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.