
ಬೆಳಗಾವಿ: ಇಲ್ಲಿನ ಟಿಳಕವಾಡಿಯ ಶುಕ್ರವಾರ ಪೇಟೆಯ ರೈಲ್ವೆ ಮೊದಲ ಗೇಟ್ ಬಳಿ ಇರುವ ಮಹಾಲಸಾ ಜ್ಯುವೆಲ್ಲರ್ಸ್ ಕಟ್ಟಡದಲ್ಲಿ ಮಹಾಶಿವರಾತ್ರಿ ನಿಮಿತ್ತ ಹೈದರಾಬಾದ್ ಮೂಲದ ಇಂಡಸ್-ನೇಪಾಳ ರುದ್ರಾಕ್ಷ ಸಂಸ್ಥೆ ಆಯೋಜಿಸಿರುವ ನೇಪಾಳದ ರುದ್ರಾಕ್ಷಿಗಳ ಪ್ರದರ್ಶನ ಮತ್ತು ಮಾರಾಟ ಮೇಳ ಆರಂಭಗೊಂಡಿದ್ದು, ಫೆ16ರವರೆಗೆ ನಡೆಯಲಿದೆ.
‘ವಿರಳವಾಗಿ ದೊರಕುವ ರತ್ನದ ಹರಳುಗಳು ಹಾಗೂ ₹4.5 ಲಕ್ಷ ಮೌಲ್ಯದ ದುಂಡುಮುಖದ ಏಕಮುಖಿ ರುದ್ರಾಕ್ಷಿ ಲಭ್ಯವಿವೆ. ರುದ್ರಾಕ್ಷಿಯನ್ನು ಯಾವಾಗ ಮತ್ತು ಯಾರು ಧರಿಸಬೇಕು ಎಂಬುದನ್ನು ಪಂಚಾಂಗ ಮತ್ತು ಕಂಪ್ಯೂಟರ್ ಸಹಾಯವಿಲ್ಲದೆ ತಿಳಿಸಲಾಗುವುದು. ಅಸಲಿ ಮತ್ತು ನಕಲಿ ರುದ್ರಾಕ್ಷಿಗಳ ನಡುವಿನ ವ್ಯತ್ಯಾಸ ತಿಳಿಸಲಾಗುವುದು. ಆಸಕ್ತರಿಗೆ ಇತರೆ ಮುಖಗಳ ರುದ್ರಾಕ್ಷಿಗಳನ್ನು ತರಿಸಿಕೊಡಲಾಗುವುದು’ ಎಂದು ಇಂಡಸ್–ನೇಪಾಳ ಸಂಸ್ಥೆಯ ನಿರ್ದೇಶಕಿ ಮಂಜು ಗಂಡಿ ತಿಳಿಸಿದ್ದಾರೆ.
ಬೆಳಿಗ್ಗೆ 10.30ರಿಂದ ರಾತ್ರಿ 8.30ರವರೆಗೆ ಮಳಿಗೆ ತೆರೆದಿರಲಿದೆ. ಮಾಹಿತಿಗಾಗಿ ಮೊ.ಸಂ.7097396666 ಸಂಪರ್ಕಿಸಬಹುದು ಎಂದು ಪ್ರಕಟಣೆ ತಿಳಿಸಿದೆ.
ಬೆಳಿಗ್ಗೆ 10.30ರಿಂದ ರಾತ್ರಿ 8.30ರವರೆಗೆ ಮೇಳಕ್ಕೆ ಭೇಟಿ ನೀಡಬಹುದು. ಮಾಹಿತಿಗೆ ನರೇಂದ್ರ ಕಾಶಿರೆಡ್ಡಿ (ಮೊ.ಸಂ.7097136666) ಸಂಪರ್ಕಿಸಬಹುದು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.