ADVERTISEMENT

ಬೆಳಗಾವಿ| ಡೀಸೆಲ್ ಸೋರಿಕೆ, ಕೆಟ್ಟುನಿಂತ ಕವಾಯತು ವಾಹನ: ಸಚಿವರ ಪರಿವೀಕ್ಷಣೆ ರದ್ದು

​ಪ್ರಜಾವಾಣಿ ವಾರ್ತೆ
Published 1 ನವೆಂಬರ್ 2025, 5:26 IST
Last Updated 1 ನವೆಂಬರ್ 2025, 5:26 IST
<div class="paragraphs"><p>ಬೆಳಗಾವಿಯಲ್ಲಿ ಶನಿವಾರ ರಾಜ್ಯೋತ್ಸವ ಕವಾಯತು ಪರಿವೀಕ್ಷಣೆಗೆ ಸಿಸ್ಧಗೊಳಿಸಿದ ಜೀಪ್ ತೈಲ ಸೋರಿಕೆಯಿಂದ ಸ್ಥಗಿತಗೊಂಡಿತು</p></div>

ಬೆಳಗಾವಿಯಲ್ಲಿ ಶನಿವಾರ ರಾಜ್ಯೋತ್ಸವ ಕವಾಯತು ಪರಿವೀಕ್ಷಣೆಗೆ ಸಿಸ್ಧಗೊಳಿಸಿದ ಜೀಪ್ ತೈಲ ಸೋರಿಕೆಯಿಂದ ಸ್ಥಗಿತಗೊಂಡಿತು

   

ಬೆಳಗಾವಿ: ಇಲ್ಲಿನ ಜಿಲ್ಲಾ ಕ್ರೀಡಾಂಗಣದಲ್ಲಿ ಶನಿವಾರ ನಡೆದ ಅದ್ಧೂರಿ ಕನ್ನಡ ರಾಜ್ಯೋತ್ಸವದ ಹಿನ್ನೆಲೆಯಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಸತೀಶ ಜಾರಕಿಹೊಳಿ‌ ಪರೇಡ್ ವೀಕ್ಷಣೆಗೆ ತೆರಳುವ ಜೀಪ್ ಡೀಸೆಲ್ ಸೋರಿಕೆಯಿಂದ ಸ್ಥಗಿತಗೊಂಡಿತು. ಸಂಭವನೀಯ ಅನಾಹುತ ತಪ್ಪಿತು.

ಧ್ವಜಾರೋಹಣ ಬಳಿಕ ಪರೇಡ್ ವೀಕ್ಷಣೆಗೆ ಹೋಗುವಾಗ ಸಚಿವ ಜೀಪ್ ಏರುವ ಮುನ್ನ ಡಿಸೇಲ್ ಸೋರಿಕೆಯಾಯಿತು. ತಕ್ಷಣ ಅಗ್ನಿಶಾಮಕ ಸಿಬ್ಬಂದಿಯಿಂದ ಬೆಂಕಿ ಹೊತ್ತದಂತೆ ಫೈಯರ್ ಕಂಟ್ರೋಲ್ ಗ್ಯಾಸ್ ಸಿಂಪಡಿಸಿ, ಜೀಪ್ ತಳ್ಳಿಕೊಂಡು ಮೈದಾನದಿಂದ ಹೊರ ತೆಗೆದುಕೊಂಡು ಹೋದರು.

ADVERTISEMENT

ಬೆಳಗಾವಿಯಲ್ಲಿ ಶನಿವಾರ ರಾಜ್ಯೋತ್ಸವ ಕವಾಯತು ಪರಿವೀಕ್ಷಣೆಗೆ ಸಿಸ್ಧಗೊಳಿಸಿದ ಜೀಪ್ ತೈಲ ಸೋರಿಕೆಯಿಂದ ಸ್ಥಗಿತಗೊಂಡಿತು

ಧ್ವಜಾರೋಹಣಕ್ಕೂ ಮುನ್ನ ತಾಯಿ ಭುವನೇಶ್ವರಿ ಮೂರ್ತಿಗೆ ಪೂಜೆ ಸಲ್ಲಿಸಿದ ಸಚಿವ ಸತೀಶ ಜಾರಕಿಹೊಳಿ‌ ಗೆ ಶಾಸಕ ಆಸೀಫ್ ಸೇಠ್, ಜಿಲ್ಲಾಧಿಕಾರಿ ಮೊಹಮ್ಮದ್ ರೋಷನ್, ಜಿಲ್ಲಾ ಪಂಚಾಯಿತಿ ಸಿಇಒ ರಾಹುಲ್ ಸಿಂಧೆ, ಪೊಲೀಸ್ ಕಮೀಷನರ್ ಭೂಷಣ್ ಬೊರಸೆ ಭಾಗಿಯಾಗಿದ್ದರು.

ಪರಿವೀಕ್ಷಣೆ ಇಲ್ಲದೇ ಆಕರ್ಷಕ ಪಥಸಂಚನ ಮಾತ್ರ ವೀಕ್ಷಣೆ ಆಗಿಮಿಸದ್ದ ಸಚಿವ ಸತೀಶ್ ಪೊಲೀಸರು, ಕೆಎಸ್‌ಆರ್‌ಪಿ ತುಕಡಿ, ಎನ್‌ಸಿಸಿ, ಸ್ಕೌಟ್ಸ್ ಸೇರಿ ವಿವಿಧ ಶಾಲಾ ವಿದ್ಯಾರ್ಥಿಗಳಿಂದ ಪಥಸಂಚನ‌ ನಡೆಸಲಾಯಿತು.

ಡೀಸೆಲ್ ಸೋರದ ಕವಾಯತು ವಾಹನ‌ ತಳ್ಳಿಕೊಂಡು ಹೋದ ಪೊಲೀಸರು

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.