ಬೆಳಗಾವಿ: ‘ಬೆಳಗಾವಿ ತಾಲ್ಲೂಕು 7ನೇ ಕನ್ನಡ ಸಾಹಿತ್ಯ ಸಮ್ಮೇಳನವನ್ನು ವಡಗಾವಿಯ ಮಲ್ಲಿಕಾರ್ಜುನ ದೇವಸ್ಥಾನದಲ್ಲಿ ಜೂನ್ 23ರಂದು ನಡೆಸುತ್ತಿರುವುದು ಅತಂತ್ಯ ಯೋಗ್ಯವಾಗಿದೆ. ಗಡಿ ಸಮಸ್ಯೆ ಎದುರಾದಾಗ ವಡಗಾವಿ, ಖಾಸಬಾಗ್, ವಡಗಾವಿ, ಶಹಾಪುರ ಭಾಗದ ಜನರು ಕನ್ನಡಕ್ಕೆ ಸದಾಕಾಲ ಬೆಂಗಾವಲಾಗಿ ನಿಲ್ಲುತ್ತಿದ್ದಾರೆ. ಹೀಗಾಗಿ, ಅಲ್ಲಿ ಕನ್ನಡ ಕಹಳೆ ಮೊಳಗಬೇಕು’ ಎಂದು ಕಾರಂಜಿಮಠದ ಗುರುಸಿದ್ದ ಸ್ವಾಮೀಜಿ ಹೇಳಿದರು.
ಸಮ್ಮೇಳನದ ಸರ್ವಾಧ್ಯಕ್ಷರಾಗಿ ಆಯ್ಕೆಯಾಗಿರುವ ಶಿವಶಂಕರ ಹಿರೇಮಠ ಅವರನ್ನು ಮಂಗಳವಾರ ಕನ್ನಡ ಸಾಹಿತ್ಯ ಭವನದಲ್ಲಿ ವಿದ್ಯುಕ್ತವಾಗಿ ಆಹ್ವಾನಿಸಿ, ಆಮಂತ್ರಣ ಪತ್ರಿಕೆ ಬಿಡುಗಡೆ ಮಾಡಿ ಅವರು ಮಾತನಾಡಿದರು.
‘ಕನ್ನಡ ಭಾಷೆ ಬೆಳವಣಿಗೆಗೆ ಸಮ್ಮೇಳನಗಳು ಪೂರಕವಾಗಿವೆ’ ಎಂದರು.
ಸಾಹಿತಿ ಗೋಪಾಲಕೃಷ್ಣ ಪೈ ಮಾತನಾಡಿ, ‘ಗಡಿ ಭಾಗದಲ್ಲಿ ಕನ್ನಡ ಕಾರ್ಯಕ್ರಮಗಳನ್ನು ಹೆಚ್ಚಾಗಿ ನಡೆಸಬೇಕು. ಇದರಿಂದ ಕನ್ನಡಕ್ಕೆ ಇನ್ನಷ್ಟು ಮೆರುಗು ಬಂದಂತಾಗುತ್ತದೆ’ ಎಂದು ತಿಳಿಸಿದರು.
ಕಸಾಪ ತಾಲ್ಲೂಕು ಘಟಕದ ಅಧ್ಯಕ್ಷ ಬಸವರಾಜ ಸಸಾಲಟ್ಟಿ, ಸಾಹಿತಿಗಳಾದ ಎಲ್.ಎಸ್. ಶಾಸ್ತ್ರಿ, ಎಂ.ಎಸ್. ಇಂಚಲ, ವಿ.ಎನ್. ಜೋಶಿ, ಬಿ.ಎಸ್. ಗವಿಮಠ, ಶಾ.ಮಂ. ಕೃಷ್ಣರಾವ್, ಬಸವರಾಜ ಜಗಜಂಪಿ, ಸುಭಾಷ ಇರಜಿ, ಮೋಹನ ಕಳಸದ, ಎ.ಎ. ಸನದಿ, ದೀಪಿಕಾ ಚಾಟೆ, ಹೇಮಾ ಸೊನ್ನೋಳ್ಳಿ, ರವೀಂದ್ರ ತೋಟಗೇರ, ವಿ. ಹಡಗಿನಾಳ, ವಿಜಯಕುಮಾರ ಜೀರಗ್ಯಾಳ, ಎಂ.ವೈ. ಮೆಣಸಿನಕಾಯಿ, ಅಶೋಕ ಮಳವಳಿ, ಮೋಹನ ಗಡಾದ, ನೀಲಗಂಗಾ ಚರಂತಿಮಠ, ಸುನಂದಾ ಎಮ್ಮಿ ಇದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.