ಬೆಳಗಾವಿ: ಕೊರೊನಾ ವೈರಾಣು ಸೋಂಕುಹರಡುವುದನ್ನು ತಡೆಗಟ್ಟುವ ನಿಟ್ಟಿನಲ್ಲಿ ಗುರುವಾರ ಸತತ 5ನೇ ದಿನವೂ ಬೆಳಗಾವಿ ಸ್ತಬ್ಧಗೊಂಡಿದೆ. ಹಾಲು ವಿತರಣೆ, ದಿನಸಿ, ತರಕಾರಿ ಹಾಗೂ ಹಣ್ಣಿನ ಅಂಗಡಿಗಳು ಬೆಳಿಗ್ಗೆ ಕೆಲಹೊತ್ತು ಕಾರ್ಯನಿರ್ವಹಿಸಿದವು.
ಇನ್ನಿತರ ಅಂಗಡಿ ಮುಂಗಟ್ಟುಗಳು ಬಂದ್ ಆಗಿವೆ. ಬಸ್, ಆಟೊ, ಟ್ರಕ್ ಹಾಗೂ ಇತರ ವಾಹನಗಳೂ ಸ್ಥಗಿತಗೊಂಡಿವೆ. ಅವಶ್ಯಕ ವಸ್ತುಗಳನ್ನು ಸಾಗಿಸುವ ಹಾಗೂ ಅವಶ್ಯಕ ಸೇವೆ ನೀಡುವ ಸಿಬ್ಬಂದಿಗಳ ವಾಹನಗಳಿಗೆ ಮಾತ್ರ ಸಂಚರಿಸಲು ಪೊಲೀಸರು ಅನುವು ಮಾಡಿಕೊಟ್ಟಿದ್ದಾರೆ.
ಸೋಷಿಯಲ್ ಡಿಸ್ಟನ್ಸಿಂಗ್:ದಿನಸಿ ಹಾಗೂ ಹಾಲು ಮಾರಾಟ ಮಾಡುವ ಅಂಗಡಿಗಳ ಎದುರು ಸೋಷಿಯಲ್ ಡಿಸ್ಟನ್ಸಿಂಗ್ಗೆ ಮಾರ್ಕ್ ಮಾಡಲಾಗಿದೆ. 2ರಿಂದ 3 ಅಡಿಗಳಷ್ಟು ಅಂತರದಲ್ಲಿ ಸರದಿ ಸಾಲು ನಿಲ್ಲಿಸಿ, ಸಾಮಾನುಗಳನ್ನು ನೀಡಲಾಗುತ್ತಿದೆ. ಗ್ರಾಹಕರು ಸಹಕರಿಸುತ್ತಿದ್ದಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.