ಬೆಳಗಾವಿ: ತಾಲ್ಲೂಕಿನ ಗೌಂಡವಾಡದಲ್ಲಿ ನಡೆದ ಕೊಲೆ, ಘರ್ಷಣೆ ಪ್ರಕರಣ ಸಂಬಂಧ ಈವರೆಗೆ 26 ಆರೋಪಿಗಳನ್ನುವಶಕ್ಕೆ ಪಡೆಯಲಾಗಿದೆ ಎಂದು ನಗರ ಪೊಲೀಸ್ ಕಮಿಷನರ್ ಡಾ.ಬೋರಲಿಂಗಯ್ಯ ಮಾಹಿತಿ ನೀಡಿದರು.
ಕೊಲೆ ಪ್ರಕರಣದಲ್ಲಿ ಏಳು ಮಂದಿ ಹಾಗೂದೊಂಬಿ,ಗಲಾಟೆ ನಡೆಸಿದ 19 ಜನರ ವಶಕ್ಕೆ ಪಡೆದಿದ್ದೇವೆ. ಗ್ರಾಮದಲ್ಲಿ ಬಂದೋಬಸ್ತ್ ಮುಂದುವರಿಸಿದ್ದು ಪರಿಸ್ಥಿತಿ ಶಾಂತವಾಗಿದೆ. ಕಾಕತಿ ಪೊಲೀಸ್ ಠಾಣೆಯಲ್ಲಿ ಕೊಲೆ ಪ್ರಕರಣ, ದೊಂಬಿ ಗಲಾಟೆ ಸಂಬಂಧ ಎರಡು ಪ್ರತ್ಯೇಕ ಪ್ರಕರಣ ದಾಖಲಾಗಿವೆ. ಸದ್ಯ ಪ್ರಕರಣದ ತನಿಖೆ ಮುಂದುವರಿದಿದೆ ಎಂದು ಅವರು ಗ್ರಾಮದಲ್ಲಿ ಭಾನುವಾರ ಮಾಧ್ಯಮದವರಿಗೆ ತಿಳಿಸಿದರು.
ಮೊದಲು ವಾಹನ ಪಾರ್ಕಿಂಗ್ ವಿಚಾರಕ್ಕೆ ಗಲಾಟೆಯಾಗಿದೆ. ಇದಕ್ಕೂ ಮೊದಲು ದೇವಸ್ಥಾನ ಜಾಗ ಒತ್ತುವರಿ ವಿಚಾರಕ್ಕೆ ವೈಷಮ್ಯವಿದ್ದ ಮಾಹಿತಿ ಇದೆ. ತನಿಖೆ ಬಳಿಕ ಆರೋಪಿಗಳ ವಿವರ ನೀಡುತ್ತೇವೆ ಎಂದರು.
ಇವನ್ನೂ ಓದಿ..
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.