ಬೆಳಗಾವಿ: ತಾಲ್ಲೂಕಿನ ಹಲಗಾ-ಮಚ್ಚೆ ಬೈಪಾಸ್ ನಿರ್ಮಾಣಕ್ಕೆ ಕೃಷಿ ಜಮೀನು ಸ್ವಾಧೀನಪಡಿಸಿಕೊಳ್ಳುವುದನ್ನು ವಿರೋಧಿಸಿ ಇಲ್ಲಿನ ಶಿವಬಸವ ನಗರದಲ್ಲಿರುವ ಉಪ ವಿಭಾಗಾಧಿಕಾರಿ ಹಾಗೂ ರಾಷ್ಟ್ರೀಯ ಹೆದ್ದಾರಿ–4ರ ಅಧಿಕಾರಿಗಳ ಕಚೇರಿಗೆ ರೈತರು ಮಂಗಳವಾರ ಮುತ್ತಿಗೆ ಹಾಕಿ ಪ್ರತಿಭಟನೆ ನಡೆಸಿದರು.
‘ನಮ್ಮ ಜಮೀನು ನಮಗೆ ಬಿಟ್ಟು ಕೊಡಿ’ ಎಂದು ಅಧಿಕಾರಿಗಳ ಎದುರು ಕೆಲವು ಮಹಿಳೆಯರು ಕಣ್ಣೀರಿಟ್ಟರು.
‘ರಸ್ತೆಗಾಗಿ ಫಲವತ್ತಾದ ಜಮೀನು ಸ್ವಾಧೀನಪಡಿಸಿಕೊಳ್ಳಲಾಗುತ್ತಿದೆ. ಹೋರಾಟ ನಡೆಸಿದ್ದರೂ ಸ್ಪಂದನೆ ದೊರೆತಿಲ್ಲ. ಅಧಿಕಾರಿಗಳು ನಮ್ಮ ಬದುಕಿನೊಂದಿಗೆ ಚೆಲ್ಲಾಟವಾಡುವುದು ಸರಿಯಲ್ಲ’ ಎಂದು ತಿಳಿಸಿದರು.
‘ಜಮೀನು ಕಸಿದುಕೊಂಡರೆ ಸಾಮೂಹಿಕ ಅತ್ಮಹತ್ಯೆ ಮಾಡಿಕೊಳ್ಳಬೇಕಾಗುತ್ತದೆ. ಮುಂದಿನ ಅನಾಹುತಗಳಿಗೆ ಅಧಿಕಾರಿಗಳೇ ಹೊಣೆ ಆಗಬೇಕಾಗುತ್ತದೆ’ ಎಂದು ಎಚ್ಚರಿಕೆ ನೀಡಿದರು.
ಮುಖಂಡರಾದ ರಾಜು ಮರವೆ, ಹನುಮಂತ ಬಾಳೇಕುಂದ್ರಿ, ಬಿ.ಬಿರ್ಜೆ, ತಾನಾಜಿ ಹಲಗೆಕರ, ಸುಭಾಷ ಲಾಡ, ಯಲ್ಲಪ್ಪ ತಾರಿಹಾಳಕರ, ಗಣಪತ ಜಾಂಗಳೆ, ಜಯಪಾಲ ದೇಸಾಯಿ, ಸಂತೋಷ ಆರೋಂದೇಕರ, ಬಾಳು ಕರಣಕರ, ರೋಹಿತ ಭಾಂದುರ್ಗೆ, ಲಕ್ಷ್ಮಣ ಪವಾರ, ಅಮಿತ ಉದಗಡಗಿ ಇದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.