ADVERTISEMENT

ಪತ್ರಿಕಾ ವಿತರಕರಿಗೆ ಸತ್ಕಾರ

​ಪ್ರಜಾವಾಣಿ ವಾರ್ತೆ
Published 4 ಸೆಪ್ಟೆಂಬರ್ 2020, 15:57 IST
Last Updated 4 ಸೆಪ್ಟೆಂಬರ್ 2020, 15:57 IST
ಮೂಡಲಗಿ ಪ್ರೆಸ್ ಕ್ಲಬ್ ವತಿಯಿಂದ ಪತ್ರಿಕಾ ವಿತರಕರನ್ನು ಶುಕ್ರವಾರ ಸತ್ಕರಿಸಲಾಯಿತು
ಮೂಡಲಗಿ ಪ್ರೆಸ್ ಕ್ಲಬ್ ವತಿಯಿಂದ ಪತ್ರಿಕಾ ವಿತರಕರನ್ನು ಶುಕ್ರವಾರ ಸತ್ಕರಿಸಲಾಯಿತು   

ಮೂಡಲಗಿ: ಇಲ್ಲಿನ ಪ್ರೆಸ್ ಕ್ಲಬ್ ವತಿಯಿಂದ ಪತ್ರಿಕಾ ವಿತರಕರ ದಿನಾಚರಣೆ ಅಂಗವಾಗಿ ಪತ್ರಿಕಾ ವಿತರಕರನ್ನು ಶುಕ್ರವಾರ ಸತ್ಕರಿಸಲಾಯಿತು.

ಸಿದ್ದಾರೂಢ ಪೂಜೇರಿ, ಪ್ರಜ್ವಲ ಪುಟಾಣಿ, ವಿನೋದ ಕಂಕಣವಾಡಿ, ಅಜಯ ಗುಡ್ಲಮನಿ, ವಿಶಾಲ ಬುಗಡಿಕಟ್ಟಿ, ಶಿವಬಸು ಜೀರಗಿ, ಸಿದ್ದಪ್ಪ ಕಪ್ಪಲಗುದ್ದಿ, ಅಮಿತಕುಮಾರ ನಾಗಪ್ಪಗೋಳ, ಧರೆಪ್ಪ ಕಪ್ಪಲಗುದ್ದಿ, ಸಚಿನ್ ಪತ್ತಾರ, ಬಂದೇನವಾಜ ಮುಲ್ಲಾ ಹಾಗೂ ಸುರೇಶ ಬೆಳವಿ ಅವರನ್ನು ಸನ್ಮಾನಿಸಲಾಯಿತು.

ಪತ್ರಕರ್ತ ಬಾಲಶೇಖರ ಬಂದಿ ಮಾತನಾಡಿ, ‘ಪತ್ರಿಕೆ ವಿತರಣೆ ಸಣ್ಣ ಕೆಲಸವಲ್ಲ. ಎಲ್ಲ ಕೆಲಸಕ್ಕೂ ಅದರದೇ ಆದ ಗೌರವವಿದೆ. ಬೆಳಿಗ್ಗೆ ಪತ್ರಿಕೆಗಳು ಮನೆಗೆ ಬರದಿದ್ದರೆ ಎಲ್ಲರಿಗೂ ನೆನಪಾಗುವುದು ವಿತರಕರೆ. ಅವರು ಕೊರೊನಾ ಸಮಯದಲ್ಲೂ ಪ್ರಾಣಕ್ಕೆ ಹೆದರದೆ ಸಮಯಕ್ಕೆ ಸರಿಯಾಗಿ ಪತ್ರಿಕೆಗಳನ್ನು ಮುಟ್ಟಿಸುವ ಕೆಲಸ ಮಾಡುತ್ತಿದ್ದಾರೆ’ ಎಂದು ಹೇಳಿದರು.

ADVERTISEMENT

ಉಮೇಶ ಬೆಳಕೂಡ ಅತಿಥಿಯಾಗಿದ್ದರು. ಮೂಡಲಗಿ ಪ್ರೆಸ್ ಕ್ಲಬ್ ಅಧ್ಯಕ್ಷ ಸುಧಾಕರ ಉಂದ್ರಿ ಅಧ್ಯಕ್ಷತೆ ವಹಿಸಿದ್ದರು. ಕಾರ್ಯದರ್ಶಿ ಅಲ್ತಾಫ ಹವಾಲ್ದಾರ, ಕಲಾವಿದ ಮಂಜುನಾಥ್ ರೇಳೆಕರ ಹಾಗೂ ಚುಟುಕುಸಾಬ ಜಾತಗಾರ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.