ADVERTISEMENT

ನಿರ್ಬಂಧದ ನಡುವೆಯೂ ರಾಜ್ಯ ಪ್ರವೇಶ: ಐವರ ಬಂಧನ

​ಪ್ರಜಾವಾಣಿ ವಾರ್ತೆ
Published 16 ಜುಲೈ 2020, 16:44 IST
Last Updated 16 ಜುಲೈ 2020, 16:44 IST

ಬೆಳಗಾವಿ: ಕೊರೊನಾ ಸೋಂಕು ಹರಡುವುದನ್ನು ನಿಯಂತ್ರಿಸಲು ಜಾರಿಗೊಳಿಸಿರುವ ಅಂತರರಾಜ್ಯ ಪ್ರವೇಶ ನಿರ್ಬಂಧ ನಿಯಮ ಉಲ್ಲಂಘಿಸಿದ ಆರೋಪದ ಮೇಲೆ ನೆರೆಯ ಮಹಾರಾಷ್ಟ್ರದ ಮೂವರನ್ನು ಚಿಕ್ಕೋಡಿ ತಾಲ್ಲೂಕಿನ ಸದಲಗಾ ಠಾಣೆ ಪೊಲೀಸರು ಗುರುವಾರ ಬಂಧಿಸಿ, ಅವರಿಂದ ಐದು ದ್ವಿಚಕ್ರವಾಹನಗಳನ್ನು ವಶಕ್ಕೆ ಪಡೆದಿದ್ದಾರೆ.

ಅವರು ಮಹಾರಾಷ್ಟ್ರದ ಕೊಲ್ಹಾಪುರ ಜಿಲ್ಲೆಯ ಶಿರೋಳ ತಾಲ್ಲೂಕಿನ ಶಿವನಾಯಕವಾಡ ಮತ್ತು ಇಂಚಲಕರಂಜಿಯಿಂದ ಅನಧಿಕೃತವಾಗಿ ಕರ್ನಾಟಕದ ಗಡಿ ಪ್ರವೇಶಿಸಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.

ಶಿವನಾಯಕವಾಡಿಯ ದತ್ತಾತ್ರೇಯ ಖೋತ, ಅಣ್ಣಾಸೋ ಖೋತ, ಇಚಲಕರಂಜಿಯ ಮಹೇಶ ಬರಬರೆ, ದಿನೇಶ ಮೋರಯಾ ಹಾಗೂ ಶಿರೋಳ ತಾಲ್ಲೂಕು ಯಡ್ರಾಂವದ ವಿಜಯಕುಮಾರ ಪಾಟೀಲ ಬಂಧಿತರು. ಅವರನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ ಎಂದು ಮಾಹಿತಿ ನೀಡಿದ್ದಾರೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.