ಬೆಳಗಾವಿ: ಇಲ್ಲಿನ ಗಾಂಧಿನಗರದ ಭಾರತ್ ಟಿಂಬರ್ ಡಿಪೊ ಆವರಣದಲ್ಲಿ ಲಾಕ್ಡೌನ್ ಹಿನ್ನೆಲೆಯಲ್ಲಿ ಮುಖಂಡ ಜೀತುಬಾಯಿ ಪಟೇಲ್ ಅವರ ನೇತೃತ್ವದಲ್ಲಿ ಬಡವರಿಗೆ ಆಹಾರದ ಕಿಟ್ಗಳನ್ನು ವಿತರಿಸಲಾಯಿತು.
ರೈಲ್ವೆ ಖಾತೆ ರಾಜ್ಯ ಸಚಿವ ಸುರೇಶ ಅಂಗಡಿ ಕಿಟ್ಗಳನ್ನು ವಿತರಿಸಿದರು.
ಇದೇ ವೇಳೆ ಡಿಪೊ ವತಿಯಿಂದ ಪಿಎಂ ಕೇರ್ಸ್ ಗೆ ನೀಡಿದ ₹25 ಸಾವಿರ ಚೆಕ್ ಅನ್ನು ಸಚಿವರು ಸ್ವೀಕರಿಸಿದರು.
ಮುಖಂಡರಾದ ಧನಂಜಯ ಜಾಧವ, ನಿಖಿಲ ಮುರಕೋಟೆ, ಸುರೇಶ ಗುಂಡಪ್ಪನವರ, ಹನಮಂತ ಕಾಗಲಕರ, ರಾಜು ಚಿಕ್ಕನಗೌಡರ, ಕನ್ನುಬಾಯಿ ಠಕ್ಕರ, ಸಂಜಯ ಭಂಡಾರಿ ಇದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.