ADVERTISEMENT

ಬೆಳಗಾವಿ: ಕೊಯ್ನಾ ಜಲಾಶಯದಿಂದ ‌ನೀರು ಬಿಡುಗಡೆ

​ಪ್ರಜಾವಾಣಿ ವಾರ್ತೆ
Published 23 ಜುಲೈ 2021, 4:48 IST
Last Updated 23 ಜುಲೈ 2021, 4:48 IST
ಕೊಯ್ನಾ ಜಲಾಶಯದಿಂದ ನೀರನ್ನು‌ ಹೊರ ಬಿಡಲಾಗಿದೆ
ಕೊಯ್ನಾ ಜಲಾಶಯದಿಂದ ನೀರನ್ನು‌ ಹೊರ ಬಿಡಲಾಗಿದೆ   

ಬೆಳಗಾವಿ: ನೆರೆಯ ಮಹಾರಾಷ್ಟ್ರದಲ್ಲಿ ಮಳೆ ಅಬ್ಬರ ಮುಂದುವರಿದಿರುವುದರಿಂದ ಅಲ್ಲಿನ‌ ಕೊಯ್ನಾ ಜಲಾಶಯದಿಂದ ಶುಕ್ರವಾರ ಬೆಳಿಗ್ಗೆ 10ಸಾವಿರ ಕ್ಯುಸೆಕ್ ನೀರನ್ನು‌ ಹೊರ ಬಿಡಲಾಗುತ್ತಿದೆ.

ಇದರಿಂದ ಕೃಷ್ಣಾ ನದಿಯ‌ಲ್ಲಿ ನೀರಿನ‌ ಹರಿವಿನ ಪ್ರಮಾಣ ಹೆಚ್ಚಾಗಲಿದೆ. ಕ್ರಮೇಣ ಹೊರಹರಿವಿನ ಪ್ರಮಾಣವನ್ನು 20ಸಾವಿರ ಕ್ಯುಸೆಕ್‌ಗೆ ಹೆಚ್ಚಿಸಲಾಗುವುದು ಎಂದು ಅಲ್ಲಿನ‌ ಅಧಿಕಾರಿಗಳು ತಿಳಿಸಿದ್ದಾರೆ ಎಂದು ಎಸ್ಪಿ‌ ಲಕ್ಷ್ಮಣ ನಿಂಬರಗಿ ತಿಳಿಸಿದ್ದಾರೆ.

ಕೊಯ್ನಾದಿಂದ ಬಿಡುಗಡೆಯಾಗುವ ನೀರು ಜಿಲ್ಲೆಯ ಚಿಕ್ಕೋಡಿ ತಾಲ್ಲೂಕಿನ ಕಲ್ಲೋಳ ಬಳಿ ಕೃಷ್ಣಾ ನದಿ ಸೇರುತ್ತದೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.