ADVERTISEMENT

ಬೆಳಗಾವಿ: ಕಾಹರ್‌ 15ನೇ ಘಟಿಕೋತ್ಸವ ಇಂದು

​ಪ್ರಜಾವಾಣಿ ವಾರ್ತೆ
Published 2 ಜೂನ್ 2025, 23:30 IST
Last Updated 2 ಜೂನ್ 2025, 23:30 IST
<div class="paragraphs"><p>ಪ್ರಭಾಕರ ಕೋರೆ</p></div>

ಪ್ರಭಾಕರ ಕೋರೆ

   

ಬೆಳಗಾವಿ: ಕೆಎಲ್‌ಇ ಉನ್ನತ ಶಿಕ್ಷಣ ಮತ್ತು ಸಂಶೋಧನಾ ಅಕಾಡೆಮಿ (ಕಾಹರ್‌) 15ನೇ ಘಟಿಕೋತ್ಸವವು ಮಂಗಳವಾರ ಕೆಎಲ್‌ಇ ಶತಮಾನೋತ್ಸವದ ಸಭಾಂಗಣದಲ್ಲಿ ನಡೆಯಲಿದೆ.

‘ಮುಂಬೈನ ಟಾಟಾ ಮೆಮೋರಿಯಲ್ ಕೇಂದ್ರದ ಉಪನಿರ್ದೇಶಕ ಡಾ.ಶೈಲೇಶ ವಿ. ಶ್ರೀಖಂಡೆ ಅವರಿಗೆ ‘ಡಾಕ್ಟರೇಟ್ ಡಾಕ್ಟರ್ ಆಫ್ ಸೈನ್ಸ್’ ನೀಡಲಾಗಿದೆ. ಕ್ಯಾನ್ಸರ್ ಶಸ್ತ್ರಚಿಕಿತ್ಸೆಯಲ್ಲಿ ಅವರದ್ದು ದೊಡ್ಡ ಹೆಸರು’ ಎಂದು ಕಾಹೆರ್‌ನ ಕುಲಾಧಿಪತಿ, ಕೆಎಲ್ ಸಂಸ್ಥೆಯ ಕಾರ್ಯಾಧ್ಯಕ್ಷ ಪ್ರಭಾಕರ ಕೋರೆ ತಿಳಿಸಿದರು.

ADVERTISEMENT

ಕುಲಪತಿ ಡಾ.ನಿತಿನ್‌ ಗಂಗಾಣೆ ಮಾತನಾಡಿ, ‘40 ಪಿಎಚ್‌.ಡಿ, 660 ಸ್ನಾತಕೋತ್ತರ ಪದವಿ, 1,080 ಪದವಿ, 9 ಪಿಜಿ ಡಿಪ್ಲೊಮಾ, 4 ಫೆಲೋಶಿಪ್ ಹಾಗೂ 11 ವಿವಿಧ ಸರ್ಟಿಫಿಕೇಟ್ ಕೋರ್ಸ್‌ಗಳ ಪದವಿ ಪ್ರದಾನ ಮಾಡಲಾಗುವುದು. 35 ವಿದ್ಯಾರ್ಥಿಗಳಿಗೆ 46 ವಿವಿಧ ಚಿನ್ನದ ಪದಕಗಳನ್ನು ನೀಡಲಾಗುವುದು’ ಎಂದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.