ಬೆಳಗಾವಿ: ಕೆಪಿಟಿಸಿಎಲ್ ಕಿರಿಯ ಸಹಾಯಕರ ನೇಮಕಾತಿ ಪರೀಕ್ಷೆಯಲ್ಲಿ ಅಕ್ರಮ ಎಸಗಿದ ಆರೋಪದಡಿ ಮತ್ತೊಬ್ಬ ಆರೋಪಿಯನ್ನು ಶುಕ್ರವಾರ ಬಂಧಿಸಲಾಗಿದೆ. ಇದರೊಂದಿಗೆ ಬಂಧಿತರ ಸಂಖ್ಯೆ 34ಕ್ಕೆ ಏರಿದೆ.
ಮೂಡಲಗಿ ತಾಲ್ಲೂಕಿನ ರಾಜಾಪುರದ ಬಾಳೇಶ ಕೆಂಚಪ್ಪ ಕಟ್ಟಿಕಾರ್ (26) ಬಂಧಿತ. ಪ್ರಕರಣ ಬೆಳಕಿಗೆ ಬಂದಾಗಿನಿಂದ ತಲೆಮರೆಸಿಕೊಂಡಿದ್ದ. ಇದೇ ಪ್ರಕರಣದಲ್ಲಿ ಆರೋಪಿತರಾದ ಸಂಜೀವ್ ಭಂಡಾರಿ, ಮಂಜುನಾಥ ಮಾಳಿ ಮತ್ತು ಶ್ರೀಧರ ಕಟ್ಟಿಕಾರ ಇವರೊಂದಿಗೆ ಸೇರಿ ಎಲೆಕ್ಟ್ರಾನಿಕ್ ಉಪಕರಣಗಳನ್ನು ಅಭ್ಯರ್ಥಿಗಳಿಗೆ ಪೂರೈಸಿದ್ದ ಎಂದು ತನಿಖಾಧಿಕಾರಿ, ಗೋಕಾಕ ಡಿವೈಎಸ್ಪಿ ವೀರೇಶ ತಿ. ದೊಡಮನಿ ತಿಳಿಸಿದ್ದಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.