ADVERTISEMENT

ಬೆಳಗಾವಿ | ಲೇಖಕಿಯರ ಸಂಘದಿಂದ ಸಾಹಿತ್ಯ ಅಭಿಯಾನ

​ಪ್ರಜಾವಾಣಿ ವಾರ್ತೆ
Published 26 ಮೇ 2020, 10:26 IST
Last Updated 26 ಮೇ 2020, 10:26 IST

ಬೆಳಗಾವಿ: ‘ಕೋವಿಡ್–19 ಲಾಕ್‌ಡೌನ್‌ ಬಿಡುವಿನಲ್ಲಿಜಿಲ್ಲಾ ಲೇಖಕಿಯರ ಸಂಘದಿಂದ ‘ಸಾಹಿತ್ಯಿ ಅಭಿಯಾನ’ದಲ್ಲಿ ಸಾಮಾಜಿಕ ಜಾಲತಾಣಗಳ ಮೂಲಕ ವಿವಿಧ ಕಾರ್ಯಕ್ರಮಗಳನ್ನು ನಡೆಸಲಾಯಿತು’ ಎಂದು ಅಧ್ಯಕ್ಷೆ ಜ್ಯೋತಿ ಬದಾಮಿ ತಿಳಿಸಿದ್ದಾರೆ.

‘ಮಿನಿ ಕಥಾ ಸ್ಪರ್ಧೆಯನ್ನು ವಾಟ್ಸ್‌ಆ್ಯಪ್‌ನಲ್ಲಿ ಹಮ್ಮಿಕೊಳ್ಳಲಾಗಿತ್ತು. 40 ಸದಸ್ಯರು ಪಾಲ್ಗೊಂಡರು. 10 ಸಾಲಿನ ಕಥೆಯಲ್ಲಿ ಮನಕಲಕುವ ಘಟನೆಗಳಿಗೆ ಅವರು ಮೂರ್ತ ರೂಪ ನೀಡಿದ್ದು ವಿಶೇಷವಾಗಿತ್ತು. ಹತ್ತು ವಿಜೇತರನ್ನು ಆಯ್ಕೆ ಮಾಡಲಾಯಿತು. ಪುಸ್ತಕ ಅಭಿಯಾನ ವಿಡಿಯೊ ಕಾರ್ಯಕ್ರಮದಲ್ಲಿ 60 ಮಂದಿ ಭಾಗವಹಿಸಿದ್ದರು. ತಮ್ಮ ಅಭಿರುಚಿಯ ಪುಸ್ತಕಗಳನ್ನು ಓದಲು ಪ್ರೇರೇಪಿಸಿದರು. ‘ಅಮ್ಮ’ ವಿಷಯದ ಕುರಿತು ವಿಡಿಯೊ ಚುಟುಕು ವಾಚನ ಅಭಿಯಾನ ಅಮ್ಮನ ಮಧುರ ನೆನಪುಗಳನ್ನು ಮರುಕಳಿಸುವಂತೆ ಮಾಡಿತು. ತಾಯಂದಿರ ಫೋಟೊಗಳನ್ನು ಅವರು ಹಂಚಿಕೊಂಡರು’ ಎಂದು ಮಾಹಿತಿ ನೀಡಿದ್ದಾರೆ.

‘ಈ ವಿನೂತನ ಅಭಿಯಾನಕ್ಕೆ ಆಶಾ, ರಾಜನಂದಾ ಗಾರ್ಗಿ ಸಹಕಾರ ನೀಡಿದರು’ ಎಂದು ತಿಳಿಸಿದ್ದಾರೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.