ADVERTISEMENT

ಅಥಣಿ: ರಜೆ ಮೇಲೆ ಊರಿಗೆ ಬಂದಿದ್ದ ಯೋಧ ಬೈಕ್‌ ಅಪಘಾತದಲ್ಲಿ ಸಾವು

​ಪ್ರಜಾವಾಣಿ ವಾರ್ತೆ
Published 8 ಸೆಪ್ಟೆಂಬರ್ 2023, 14:18 IST
Last Updated 8 ಸೆಪ್ಟೆಂಬರ್ 2023, 14:18 IST
<div class="paragraphs"><p>ಲಕ್ಷ್ಮಣ ಘೋರ್ಪಡೆ</p></div>

ಲಕ್ಷ್ಮಣ ಘೋರ್ಪಡೆ

   

ಅಥಣಿ: ರಜೆ ಮೇಲೆ ಊರಿಗೆ ಬಂದಿದ್ದ ಯೋಧ, ಗುರುವಾರ ರಾತ್ರಿ ಸಂಭವಿಸಿದ ಬೈಕ್‌ ಅಪಘಾತದಲ್ಲಿ ಮೃತಪಟ್ಟಿದ್ದಾರೆ.

ಅಥಣಿ ತಾಲ್ಲೂಕಿನ ನದಿ ಇಂಗಳಗಾಂವ ಗ್ರಾಮದ ಲಕ್ಷ್ಮಣ ಘೋರ್ಪಡೆ (23) ಮೃತರು. ಅವರೊಂದಿಗೆ ಇದ್ದ ಹಿಂಬದಿ ಸವಾರ, ಯೋಧ ಸತೀಶ ಘೋರ್ಪಡೆ ಗಂಭೀರವಾಗಿ ಗಾಯಗೊಂಡಿದ್ದು, ಮಿರಜ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಯೋಧ ಲಕ್ಷ್ಮಣ ಘೋರ್ಪಡೆ, ಅರುಣಾಚಲ ಪ್ರದೇಶದ ಲೂಂಪು ಘಟಕದಲ್ಲಿ ಸೇವೆ ಸಲ್ಲಿಸುತ್ತಿದ್ದರು.

ADVERTISEMENT

ಯೋಧನ ಮೃತದೇಹವನ್ನು ದರೂರ ಗ್ರಾಮದಿಂದ ನದಿ ಇಂಗಳಗಾಂವ ಗ್ರಾಮದವರೆಗೆ ವಾಹನದ ಮೂಲಕ ಮೆರವಣಿಗೆ ನಡೆಸಲಾಯಿತು. ಸ್ವಗ್ರಾಮದಲ್ಲಿ ಸರ್ಕಾರಿ ಗೌರವಗಳೊಂದಿಗೆ ಅಂತ್ಯಕ್ರಿಯೆ ನೆರವೇರಿಸಲಾಯಿತು. ಮಾಜಿ ಮಹೇಶ ಕುಮಠಳ್ಳಿ, ಯುವ ಮುಖಂಡರಾದ ಚಿದಾನಂದ ಸವದಿ, ಶಶಿಕಾಂತ ಪಡಸಲಗಿ ಸೇರಿದಂತೆ ವಿವಿಧ ರಾಜಕೀಯ ಮುಖಂಡರು ಅಂತ್ಯಕ್ರಿಯೆಯಲ್ಲಿ ಪಾಲ್ಗೊಂಡು ಅಂತಿಮ ನಮನ ಸಲ್ಲಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.