ಅಥಣಿ: ತಾಲ್ಲೂಕಿನಲ್ಲಿ ಕೆಲವು ಸಮಾಜಸೇವಕರು ಸ್ವಂತ ಖರ್ಚಿನಲ್ಲಿ, ಟ್ಯಾಂಕರ್ಗಳಿಂದ ನೀರು ಪೂರೈಸಿ ಗ್ರಾಮೀಣ ಜನರಿಗೆ ನೆರವಾಗುವ ಮೂಲಕ ಗಮನಸೆಳೆದಿದ್ದಾರೆ.
ದರೆಪ್ಪ ಠಕ್ಕಣವರ ಅವರು ನದಿಇಂಗಳಗಾವ, ಸಂಕೋನಟ್ಟಿ ಹಲ್ಯಾಳ ಮೊದಲಾದ ಹಳ್ಳಿಗಳಿಗೆ ನೀರು ಪೂರೈಸುತ್ತಿದ್ದಾರೆ. ‘ಕೃಷ್ಣಾ ನದಿಗೆ ನೀರು ಬರುವರೆಗೂ ಹಳ್ಳಿಗಳಿಗೆ ಟ್ಯಾಂಕರ್ ಕಳುಹಿಸುತ್ತೇನೆ’ ಎಂದು ಅವರು ತಿಳಿಸಿದರು.
ಪಟ್ಟಣದಲ್ಲಿ ಸ್ವಂತ ಜಾಗದಲ್ಲಿ ಕೊಳವೆಬಾವಿ ಕೊರೆಸಿರುವ ಸಂತೋಷ ಸಾವಡಕರ್ ಜನರಿಗೆ ಉಚಿತವಾಗಿ ನೀರು ಒದಗಿಸುತ್ತಿದ್ದಾರೆ. ಇದರಿಂದ ಸಾವಡಕರರ್ ಪ್ಲಾಟ್, ವಿಕ್ರಮಪುರ ಬಡಾವಣೆಯ ಜನರಿಗೆ ಬಹಳ ಅನುಕೂಲವಾಗಿದೆ. ಇಲ್ಲಿ ಸಾರ್ವಜನಿಕರು ಯಾವಾಗ ಬೇಕಾದರೂ ಬಂದು ನೀರು ತೆಗೆದುಕೊಂಡು ಹೋಗಬಹುದಾದ ವ್ಯವಸ್ಥೆ ಮಾಡಿದ್ದಾರೆ. ಇದು ಜನರ ಮೆಚ್ಚುಗೆಗೆ ಪಾತ್ರವಾಗಿದೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.