ಹುಕ್ಕೇರಿ: ಪಟ್ಟಣದಲ್ಲಿ ಮಂಗಳವಾರ ಅರಳಿ ಮರಕ್ಕೆ ನೂಲು ಸುತ್ತುವುದರ ಮೂಲಕ ಶ್ರದ್ಧಾ ಭಕ್ತಿಯಿಂದ ಮುತ್ತೈದೆಯರು ವಟ ಸಾವಿತ್ರಿ ವೃತ ಆಚರಿಸಿದರು.
ತಮ್ಮ ಗಂಡಂದಿರ ವಯಸ್ಸು ಹೆಚ್ಚಾಗಲೆಂದು ದಿನವಿಡಿ ಉಪವಾಸವಿದ್ದು, ಮುತ್ತೈದೆಯರು ಕರಿಮಣಿ, ಎಲೆ, ಅಡಿಕೆ, ಅರಿಷಿಣ, ಬಾಳೆಹಣ್ಣು, ಕಡಲೆಕಾಳು ಸಮೇತ ಮಹಿಳೆಯರಿಗೆ ಉಡಿ ತುಂಬಿ ಆರತಿ ಬೆಳಗಿ ನಮಸ್ಕರಿಸಿದರು.
ಪಟ್ಟಣದಲ್ಲಿ ಕೆಲವೊಂದು ಜನರು ಬುಧವಾರ ವಟ ಸಾವಿತ್ರಿ ವೃತ ಆಚರಿಸಲಿದ್ದಾರೆ. ಏಕೆಂದರೆ ವೃತವು ಎರಡು ದಿನ ಬಂದಿದೆ ಎಂದು ಬಸವ ನಗರ ನಿವಾಸಿ ಮಹಾದೇವಿ ಕಾಂಬಳೆ ಹೇಳಿದರು. ಕೆಲವೊಂದು ಮಹಿಳೆಯರು ವೃತವನ್ನು ಪಂಚಾಂಗದ ಪ್ರಕಾರ ಆಚರಿಸುವರು.
ಬೈಪಾಸ್ ರಸ್ತೆಯ ಲಕ್ಷ್ಮೀ ಗುಡಿ ಬಳಿಯ ಆಲದ ಮರ, ಎಸ್.ಎಸ್.ಎನ್.ಕಾಲೇಜು ಆವರಣದಲ್ಲಿನ ಆಲದ ಮರ, ಬೈಪಾಸ್ ರಸ್ತೆಯ ಪಕ್ಕದ ಆಲದ ಮರಕ್ಕೆ ನೂರಾರು ಮಹಿಳೆಯರು ನೂಲು ಸುತ್ತಿ, ಪೂಜೆ ಸಲ್ಲಿಸಿ ಮಂಗಳವಾರ ವೃತ ಆಚರಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.