ADVERTISEMENT

ಅಂಧರಿಗೆ ಕಂಪ್ಯೂಟರ್ ತರಬೇತಿ

​ಪ್ರಜಾವಾಣಿ ವಾರ್ತೆ
Published 2 ಮೇ 2014, 19:30 IST
Last Updated 2 ಮೇ 2014, 19:30 IST
ಕರ್ನಾಟಕ ಅಂಧರ ಕ್ಷೇಮಾಭ್ಯುದಯ ಸಂಘದಲ್ಲಿ ಶುಕ್ರವಾರ ಉದ್ಘಾಟನೆಯಾದ ‘ಗಣಕಯಂತ್ರ ಮತ್ತು ಭಾಷಾ ಕೌಶಲ ತರಬೇತಿ ಘಟಕ’ದಲ್ಲಿ ಕಂಪ್ಯೂಟರ್‌ ಬಳಸುತ್ತಿರುವ ಅಂಧ ವಿದ್ಯಾರ್ಥಿ	–ಪ್ರಜಾವಾಣಿ ಚಿತ್ರ
ಕರ್ನಾಟಕ ಅಂಧರ ಕ್ಷೇಮಾಭ್ಯುದಯ ಸಂಘದಲ್ಲಿ ಶುಕ್ರವಾರ ಉದ್ಘಾಟನೆಯಾದ ‘ಗಣಕಯಂತ್ರ ಮತ್ತು ಭಾಷಾ ಕೌಶಲ ತರಬೇತಿ ಘಟಕ’ದಲ್ಲಿ ಕಂಪ್ಯೂಟರ್‌ ಬಳಸುತ್ತಿರುವ ಅಂಧ ವಿದ್ಯಾರ್ಥಿ –ಪ್ರಜಾವಾಣಿ ಚಿತ್ರ   

ಬೆಂಗಳೂರು: ಕಂಪ್ಯೂಟರ್ ನೀಡುತ್ತಿದ್ದ ಮೌಖಿಕ ಮಾರ್ಗದರ್ಶನಕ್ಕೆ ಪ್ರತಿಕ್ರಿಯಿ­ಸುತ್ತಾ ಅಂಧ ವಿದ್ಯಾರ್ಥಿಯೊಬ್ಬರು ಅಷ್ಟೇ ವೇಗವಾಗಿ ಇ– ಮೇಲ್ ಕಳುಹಿಸಿ­ದಾಗ ನೆರೆದಿದ್ದವರಲ್ಲಿ ಆಶ್ಚರ್ಯ ಮತ್ತು ಕುತೂಹಲ; ಬ್ರೈಲ್ ಮುದ­್ರ-­ಕವು ಕ್ಷಣಾರ್ಧದಲ್ಲಿಯೇ ಮುದ್ರಿ­ಸಿದ  ಬ್ರೈಲ್ ಲಿಪಿಯ ಪಠ್ಯ­ಗ­ಳನ್ನು ಓದುತ್ತಾ ಆನಂದಿಸಿದ ಅಂಧರು.

ಕರ್ನಾಟಕ ಅಂಧರ ಕ್ಷೇಮಾ­ಭ್ಯುದಯ ಸಂಘವು ಶುಕ್ರವಾರ ಏರ್ಪ­ಡಿಸಿದ್ದ ‘ಗಣಕಯಂತ್ರ ಮತ್ತು ಭಾಷಾ ಕೌಶಲ ತರಬೇತಿ ಘಟಕ’ದ ಉದ್ಘಾ­ಟನಾ ಸಮಾರಂಭವು ಮೇಲಿನ ದೃಶ್ಯಗಳಿಗೆ ಸಾಕ್ಷಿಯಾಯಿತು. ಮಾಜಿ ಅಡ್ವೊಕೇಟ್ ಜನರಲ್  ಎಸ್. ವಿಜಯಶಂಕರ್ ಅವರು ತರ­ಬೇತಿ ಘಟಕವನ್ನು ಉದ್ಘಾಟಿಸಿ­ದರು.

ಸಂಘದ ಗೌರವ ಕಾರ್ಯದರ್ಶಿ  ಎಸ್.ಪರಮಶಿವಮೂರ್ತಿ ಮಾತ­ನಾಡಿ, ‘ಕಂಪ್ಯೂಟರ್ ಮತ್ತು ಅಂತ­ರ್ಜಾಲ ಜಗತ್ತಿ­ನಿಂದ ಅಂಧರು ದೂರ ಉಳಿಯ­ಬಾ­ರದು ಎಂದು ತರ­ಬೇತಿ ಘಟಕ­ವನ್ನು ಆರಂಭಿಸ­­ಲಾಗಿದೆ. ಕಂಪ್ಯೂ­­ಟರ್‌­ನಲ್ಲಿ ಕನ್ನಡ ಮತ್ತು ಇಂಗ್ಲಿಷ್ ಭಾಷಾ ಬಳಕೆ ಹಾಗೂ ಅಂತ­ರ್ಜಾಲ ಬಳಕೆ ಕುರಿತು ತರ­ಬೇತಿ ನೀಡ­ಲಾಗು­ವುದು’ ಎಂದರು.

‘ಪ್ರತಿ ದಿನ ಬೆಳಿಗ್ಗೆ 8 ರಿಂದ ರಾತ್ರಿ 7.30ರವರೆಗೆ ತರಗತಿಗಳು ನಡೆಯ­ಲಿವೆ. ಅಂಧರು ಮಾತ್ರವಲ್ಲದೆ ಓಡಾ­ಟಕ್ಕೆ ಅನು­ಕೂಲವಿರುವ ಅಂಗ­ವಿಕಲ­ರೂ ತರ­ಬೇತಿ­­­ಯಲ್ಲಿ ಭಾಗವಹಿಸಬಹುದು’ ಎಂದರು.  ತರಬೇತಿ ಘಟಕವು ಮೌಖಿಕ ಮಾರ್ಗ­ದರ್ಶನ ನೀಡುವ ವಿಶೇಷ ತಂತ್ರಾಂಶ– ‘ಜಾಸ್’ ಅಳವಡಿಸಿರುವ 12 ಕಂಪ್ಯೂಟರ್‌ಗಳು ಮತ್ತು ಒಂದು ಬ್ರೈಲ್ ಮುದ್ರಕವನ್ನು ಹೊಂದಿದೆ. ಮೇ 15ರಿಂದ ತರಬೇತಿ ಆರಂಭ­ವಾಗಲಿದೆ. ಸಂಘದ ಅಧ್ಯಕ್ಷ ಎನ್.ಎಂ. ಪಾಟೀಲ್, ರೇಣುಕಾ ವಿಜಯಶಂಕರ್ ಇದ್ದರು.
ಸಂಪರ್ಕಕ್ಕೆ: 97411 22706.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.