ಬೆಂಗಳೂರು: ‘ಈಡಿಗರನ್ನು ಕೋಣಕ್ಕೆ ಹೋಲಿಸಿ ಮಾತನಾಡಿರುವ ಅರುಣಕುಮಾರ್ ಪಾಟೀಲ ತಕ್ಷಣವೇ ಬಹಿರಂಗವಾಗಿ ಈಡಿಗ ಸಮುದಾಯದವರ ಕ್ಷಮೆ ಯಾಚಿಸಬೇಕು’ ಎಂದು ಕರ್ನಾಟಕ ಪ್ರದೇಶ ಆರ್ಯ ಈಡಿಗರ ಸಂಘ ಒತ್ತಾಯಿಸಿದೆ.
ಗುರುವಾರ ಇಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಸಂಘದ ಪ್ರಧಾನ ಕಾರ್ಯದರ್ಶಿ ಎಸ್. ಚಂದ್ರಶೇಖರ್ ಮಾತನಾಡಿ, ‘ಕಲಬುರ್ಗಿಯಲ್ಲಿ ನಡೆದ ಬೆಂಬಲಿಗರ ಸಭೆಯಲ್ಲಿ ಮಾಲೀಕಯ್ಯ ಗುತ್ತೇದಾರ್ ಅವರನ್ನು ಟೀಕಿಸುವ ಭರದಲ್ಲಿ ಅರುಣ್ಕುಮಾರ್ ಸಮಗ್ರ ಈಡಿಗ ಸಮುದಾಯಕ್ಕೇ ಅವಮಾನ ಮಾಡಿದ್ದಾರೆ. ಚುನಾವಣಾ ಸಂದರ್ಭದಲ್ಲಿ ಇಂಥ ಮಾತುಗಳನ್ನು ಆಡುವುದು ಅಕ್ಷಮ್ಯ. ಅಲ್ಲದೆ ಇದು ಸಮಾಜದ ಶಾಂತಿ ಕದಡುವ ನಡೆಯಾಗಿದ್ದು ಇನ್ನೆಂದೂ ಇಂಥ ಮಾತುಗಳನ್ನು ಆಡುವುದಿಲ್ಲ ಎಂದು ಬಹಿರಂಗವಾಗಿ ಒಪ್ಪಿಕೊಳ್ಳಬೇಕು’ ಎಂದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.