ಮಹದೇವಪುರ: ಕ್ಷೇತ್ರದ ವರ್ತೂರು ಗ್ರಾಮದ ಹೊರವಲಯದಲ್ಲಿ ಕೆರೆಯ ನೀರು ಹರಿದುಹೋಗುವಲ್ಲಿ ನಿರ್ಮಿಸಲಾಗಿರುವ ಸೇತುವೆಯ ತಡೆಗೋಡೆಯನ್ನು ಈಚೆಗೆ ದುರಸ್ತಿಗೊಳಿಸಲಾಯಿತು.
ಕೆಲವು ವರ್ಷಗಳ ಹಿಂದೆಯಷ್ಟೇ ನಿರ್ಮಾಣಗೊಂಡ ಸೇತುವೆ ಕಳಪೆ ಕಾಮಗಾರಿಯಿಂದಾಗಿ ಶಿಥಿಲಗೊಂಡಿದೆ. ಅಲ್ಲದೆ ತಡೆಗೋಡೆ ಹಂತ ಹಂತವಾಗಿ ಮುರಿದು ಬೀಳುತ್ತಿದೆ ಎಂಬುದರ ಕುರಿತಾಗಿ `ಪ್ರಜಾವಾಣಿ~ಯಲ್ಲಿ `ಸೇತುವೆ ತಡೆಗೋಡೆಗೆ ಬಿರುಕು~ ಎಂಬ ವರದಿ ಪ್ರಕಟವಾಗಿತ್ತು.
ವರದಿಗೆ ಸ್ಪಂದಿಸಿದ ಬಿಬಿಎಂಪಿ ಕೂಡಲೇ ಮುರಿದು ಬಿದ್ದ ತಡೆಗೋಡೆಯನ್ನು ಸಿಮೆಂಟ್ ಮೂಲಕ ದುರಸ್ತಿಗೊಳಿಸಿದೆ. `ಆದಷ್ಟು ಶೀಘ್ರದಲ್ಲಿ ಪಾದಚಾರಿ ಮಾರ್ಗವನ್ನು ದುರಸ್ತಿಗೊಳಿಸಬೇಕು~ ಎಂದು ಜನತೆ ಆಗ್ರಹಿಸಿದ್ದಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.