ADVERTISEMENT

ಐಐಎಸ್‌ಸಿಗೆ ₹ 5 ಕೋಟಿ ದೇಣಿಗೆ

​ಪ್ರಜಾವಾಣಿ ವಾರ್ತೆ
Published 8 ಆಗಸ್ಟ್ 2018, 18:59 IST
Last Updated 8 ಆಗಸ್ಟ್ 2018, 18:59 IST

ಬೆಂಗಳೂರು: ಹೈದರಾಬಾದ್‌ನ ರಸಾಯನ ವಿಜ್ಞಾನಿ ಮತ್ತು ಉದ್ಯಮಿ ಡಾ.ಎ.ವಿ.ರಾಮರಾವ್‌ ಭಾರತೀಯ ವಿಜ್ಞಾನ ಸಂಸ್ಥೆ ₹ 5 ಕೋಟಿ ದೇಣಿಗೆ ನೀಡಿದ್ದಾರೆ.

ಐಐಎಸ್‌ಸಿಯಲ್ಲಿ ನಿರ್ಮಾಣಗೊಳ್ಳುವ ರಸಾಯನ ವಿಜ್ಞಾನ ವಿಭಾಗದ ಹೊಸ ಕಟ್ಟಡದಲ್ಲಿ ರಾವ್‌ ಹೆಸರಿನಲ್ಲಿ ಅತ್ಯಾಧುನಿಕ ಸಭಾಂಗಣವನ್ನು ನಿರ್ಮಿಸಲಾಗುವುದು. ಭಾರತೀಯ ರಸಾಯನ ತಂತ್ರಜ್ಞಾನ ಸಂಸ್ಥೆಯ ಮಾಜಿ ನಿರ್ದೇಶಕರಾಗಿರುವ ರಾವ್‌ 1995 ರಲ್ಲಿ ಹೈದರಾಬಾದ್‌ನಲ್ಲಿ ಎವಿಆರ್‌ಎ ಪ್ರಯೋಗಾಲಯವನ್ನು ಆರಂಭಿಸಿದರು ಎಂದು ಭಾರತೀಯ ವಿಜ್ಞಾನ ಸಂಸ್ಥೆ ಪ್ರಕಟಣೆಯಲ್ಲಿ ತಿಳಿಸಿದೆ.ಐಐಎಸ್‌ಸಿ ನಿರ್ದೇಶಕ ಪ್ರೊ.ಅನುರಾಗ್ ಕುಮಾರ್‌ ಅವರಿಗೆ ಚೆಕ್‌ ಹಸ್ತಾಂತರಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT