ಬೆಂಗಳೂರು: ಬ್ಯಾಟರಾಯನಪುರ ಸಂಚಾರ ಠಾಣೆ ವ್ಯಾಪ್ತಿಯಲ್ಲಿ ರಸ್ತೆ ದಾಟುತ್ತಿದ್ದ ವೇಳೆ ಕಾರು ಡಿಕ್ಕಿ ಹೊಡೆದ ಪರಿಣಾಮ ಎರಡು ವರ್ಷದ ಮಗು ಸ್ಥಳದಲ್ಲೇ ಮೃತಪಟ್ಟಿದೆ.
ನಾಗರಬಾವಿಯ ಟೀಚರ್ಸ್ ಲೇಔಟ್ ನಿವಾಸಿ ಭವಾನಿಸಿಂಗ್ ಪುತ್ರಿ ಝಾನ್ಸಿ (2) ಮೃತ ಬಾಲಕಿ. ಈ ಸಂಬಂಧ ಪಶುವೈದ್ಯ ಉಪೇಂದ್ರ(64) ಎಂಬುವರನ್ನು ಬಂಧಿಸಲಾಗಿದೆ.
‘ತಾಯಿ ಹಾಗೂ ಚಿಕ್ಕಮ್ಮನ ಜತೆ ನಾಗರಬಾವಿ ವಿಲೇಜ್ನಲ್ಲಿರುವ ಚಿನ್ನಾಭರಣ ಅಂಗಡಿಗೆ ಝಾನ್ಸಿ ತೆರಳಿದ್ದಳು. ಝಾನ್ಸಿ ಚಿಕ್ಕಮ್ಮನ ಜತೆ ಅಂಗಡಿಯೊಂದರ ಬಳಿ ನಿಂತಿದ್ದಳು. ಆಕೆಯ ತಾಯಿ ಮೊಬೈಲ್ನಲ್ಲಿ ಮಾತಾಡಿಕೊಂಡು ಚಿನ್ನಾಭರಣ ಅಂಗಡಿ ಕಡೆಯ ಮುಂಭಾಗದಲ್ಲಿ ರಸ್ತೆಬದಿ ನಿಂತಿದ್ದರು. ಅದನ್ನು ಗಮನಿಸಿದ ಝಾನ್ಸಿ, ತಾಯಿ ಬಳಿ ಹೋಗಲು ಏಕಾಏಕಿ ಓಡಿ ಬಂದಿದ್ದಾಳೆ. ಅದೇ ವೇಳೆ ನಾಗರಬಾವಿ ಕಡೆಗೆ ತೆರಳಲು ವೇಗವಾಗಿ ಬಂದ ಉಪೇಂದ್ರ ಅವರು ಕಾರನ್ನು ಬಲಕ್ಕೆ ತಿರುವು ಪಡೆದಾಗ ಮಗುವಿಗೆ ಡಿಕ್ಕಿ ಹೊಡೆದಿದ್ದು, ಆಕೆ ಮೇಲೆಯೇ ಕಾರು ಹರಿದಿತ್ತು’ ಎಂದು ಪೊಲೀಸರು ಹೇಳಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.